ಶಿಕಾರಿಪುರ: ಕರ್ತವ್ಯದ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ದುರ್ಮರಣ

​ಶಿಕಾರಿಪುರ: ತಾಲೂಕಿನ ಕೆಇಬಿ ಸ್ಟೇಷನ್ ಎದುರು ವಿದ್ಯುತ್ ಲೈನ್ ಸರಿಪಡಿಸುವ ಕೆಲಸದಲ್ಲಿ ತೊಡಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ​ಮೃತರು ತಮ್ಮ ಕರ್ತವ್ಯದ ಅವಧಿಯಲ್ಲಿ 110/11 ಕೆವಿ ಸ್ಟೇಷನ್ ನಲ್ಲಿ ಲೈನ್ ದುರಸ್ತಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕರೆಂಟ್ ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ​ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬವು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮೂವರು […]

ಶಿಕಾರಿಪುರ: ಚಿರತೆ ದಾಳಿಗೆ ಇಬ್ಬರು ರೈತರಿಗೆ ಗಾಯ; ಆತಂಕದಲ್ಲಿ ಗ್ರಾಮಸ್ಥರು

​ಶಿಕಾರಿಪುರ: ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ರೈತರು ಗಾಯಗೊಂಡಿದ್ದಾರೆ. ಈ ಘಟನೆಗಳಿಂದಾಗಿ ಅಡಗಂಟಿ ಮತ್ತು ತಡಸನಹಳ್ಳಿ ಭಾಗದ ರೈತರಲ್ಲಿ ತೀವ್ರ ಭೀತಿ ಆವರಿಸಿದೆ. ​ಘಟನೆಯ ವಿವರ:ಅಡಗಂಟಿ ಗ್ರಾಮದ ನಿವಾಸಿ ಸುದೀಪ್ (24) ಎಂಬುವವರು ಶುಕ್ರವಾರ ಸಂಜೆ ತಮ್ಮ ಜಮೀನಿನಲ್ಲಿ ಮೇವು ಕೊಯ್ಯುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ ಮೈಕೈಗೆ ತರಚಿದ ಗಾಯಗಳಾಗಿದ್ದು, ಅವರನ್ನು ಶಿರಾಳಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಶಿವಮೊಗ್ಗದ […]

ಚಾರ್ಮಾಡಿ ಘಾಟ್ ನಲ್ಲಿ ಟಿಟಿ ವಾಹನ ಪಲ್ಟಿ:9 ಮಂದಿಗೆ ಗಂಭೀರ ಗಾಯ, ಓರ್ವ ವೃದ್ಧ ಸಾವು

ಕೊಟ್ಟಿಗೆಹಾರ : ಬ್ರೇಕ್ ಫೈಲ್ ಆಗಿ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿ ಒಂಬತ್ತು ಮಂದಿ ಗಂಭೀರ ಗಾಯವಾಗಿದ್ದು. ಓರ್ವ ವೃದ್ಧ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನ ಒಂಬತ್ತನೇ ತಿರುವಿನಲ್ಲಿ ಬ್ರೇಕ್ ಫೈಲ್ ಆಗಿ ಟಿಟಿ ವಾಹನ ಪಲ್ಟಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೇಲನಹಳ್ಳಿಯಿಂದ 10 ಮಂದಿ ಸೇರಿದಂತೆ ಮೂವರು ಮಕ್ಕಳು ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಮಾ.21 ರಂದು ಬೆಳಗ್ಗೆ ಘಟನೆ ನಡೆದಿದೆ. ಟಿಟಿ ವಾಹನಲ್ಲಿ ಒಂದೇ ಕುಟುಂಬದ 13 ಮಂದಿಯಲ್ಲಿ 9 ಮಂದಿಗೆ […]

ಶಿಕಾರಿಪುರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ:ಹಸಿವು ಮುಕ್ತ ಸಮಾಜವೇ ಕಾಂಗ್ರೆಸ್ ಗುರಿ; ಸಚಿವ ಮಧು ಬಂಗಾರಪ್ಪ

​ಶಿಕಾರಿಪುರ: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಿಂತಲೂ ಬಡವರ ಮತ್ತು ಹಸಿದವರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಾ ಬಂದಿದೆ. ಇಂದಿರಾ ಗಾಂಧಿಯವರ ಕಾಲದಿಂದಲೂ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಪಕ್ಷದ ಮೂಲ ಮಂತ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ​ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ಇಂದಿರಾ ಕ್ಯಾಂಟಿನ್’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಮ್ಮ ಸರ್ಕಾರ […]

ಸಾವು ಗೆದ್ದ ಸಂಸಾರ: ಕಾರಿನ ಮೇಲೆ ಉರುಳಿದ ಕಟ್ಟಿಗೆ ಲಾರಿ ನಜ್ಜುಗುಜ್ಜಾದ ಕಾರು: ದಂಪತಿ, ಮಗು ಪವಾಡಸದೃಶ ಪಾರು!

​ಚಿಕ್ಕಮಗಳೂರು: ಅದೃಷ್ಟವೋ ಅಥವಾ ಪವಾಡವೋ ಎಂಬಂತೆ, ಸಾಕ್ಷಾತ್ ಮೃತ್ಯುವೇ ಎದುರು ಬಂದರೂ ಚಿಕ್ಕಮಗಳೂರಿನ ದಂಪತಿ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮೇಲೆ ಭಾರೀ ಪ್ರಮಾಣದ ಕಟ್ಟಿಗೆ ತುಂಬಿದ್ದ ಲಾರಿಯೊಂದು ಉರುಳಿ ಬಿದ್ದರೂ, ಅದೃಷ್ಟವಶಾತ್ ಒಳಗಿದ್ದ ಮೂವರೂ ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದಾರೆ. ​ಘಟನೆಯ ವಿವರ:​ಚಿಕ್ಕಮಗಳೂರು ತಾಲೂಕಿನ ನಗರದ ಹೊರವಲಯದ ಲಕ್ಯಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಸಂಚರಿಸುತ್ತಿದ್ದ ಕಾರಿನ ಪಕ್ಕದಲ್ಲೇ ಬರುತ್ತಿದ್ದ ಕಟ್ಟಿಗೆ ಲೋಡ್ ತುಂಬಿದ ಲಾರಿಯೊಂದು ಅಚಾನಕ್ ಆಗಿ ನಿಯಂತ್ರಣ […]

ಶಿಕಾರಿಪುರದಲ್ಲಿ ವಾಣಿಜ್ಯ ಪದವೀಧರರಿಗೆ ಉದ್ಯೋಗಾವಕಾಶ..!

​ಶಿಕಾರಿಪುರ: ತಾಲ್ಲೂಕಿನ ವಾಣಿಜ್ಯ ಪದವೀಧರರಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಪಟ್ಟಣದ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಕಚೇರಿಯಲ್ಲಿ ಖಾಲಿ ಇರುವ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ​ಹುದ್ದೆಯ ವಿವರ:ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿರುವ ತಟ್ಟೀಹಳ್ಳಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಹೆಚ್. ಆರ್. ಸುರೇಶ್ ಕುಮಾರ್, ಚಾರ್ಟರ್ಡ್ ಅಕೌಂಟೆಂಟ್ ಅವರ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ಇಬ್ಬರು (02) ವಾಣಿಜ್ಯ ಪದವೀಧರರ (B.Com Graduates) ಅವಶ್ಯಕತೆ ಇದೆ. ​ಅರ್ಹತೆಗಳು:​ಬಿ.ಕಾಂ ಅಥವಾ ಸಂಬಂಧಿತ ವಾಣಿಜ್ಯ ಪದವಿ ಹೊಂದಿರಬೇಕು.​ಅಕೌಂಟಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹಾಗೂ […]

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಶಿಕಾರಿಪುರದಲ್ಲಿ ಬೃಹತ್‌ ಪ್ರತಿಭಟನೆ

ಶಿಕಾರಿಪುರ: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಉಪಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ​ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಸಮಾಜದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ […]

ಕರ್ನಾಟಕ ಬಜೆಟ್: 56,000 ಉದ್ಯೋಗ, 40 ಕಿ.ಮೀ ಸುರಂಗ ರಸ್ತೆ, ರೈತರಿಗೆ 30,000 ಕೋಟಿ ಸಾಲ; ಗ್ಯಾರಂಟಿಗಳ ಗಟ್ಟಿ ಬುನಾದಿಯ ಸಮಗ್ರ ಬಜೆಟ್!

​ಬೆಂಗಳೂರು:ಮುಖ್ಯಮಂತ್ರಿಯವರು ತಮ್ಮ 17ನೇ ಆಯವ್ಯಯವನ್ನು ಮಂಡಿಸಿದ್ದು, ಇದು ರಾಜ್ಯದ 7 ಕೋಟಿ ಕನ್ನಡಿಗರ ನಿರೀಕ್ಷೆಗಳನ್ನು ಪ್ರತಿಧ್ವನಿಸುವ ‘ಜೀವಂತ ದಾಖಲೆ’ಯಾಗಿದೆ ಎಂದು ಬಣ್ಣಿಸಿದ್ದಾರೆ. ಈ ಬಜೆಟ್ ಕೇವಲ ಅಂಕಿಅಂಶಗಳ ಪಟ್ಟಿಯಲ್ಲದೆ, ಮಾನವ ಅಭಿವೃದ್ಧಿಯನ್ನು ಕೇಂದ್ರೀಕರಿಸಿದ ಜನಕೇಂದ್ರಿತ ಆರ್ಥಿಕ ತತ್ವಗಳ ಮೇಲೆ ರೂಪಿತವಾಗಿದೆ. ​1. ಅಭಿವೃದ್ಧಿಯ ಹೊಸ ಹಾದಿ: 11-G ಮಾದರಿ ಆರ್ಥಿಕತೆ​ರಾಜ್ಯದ ಸುಸ್ಥಿರ ಪ್ರಗತಿಗಾಗಿ ಸರ್ಕಾರವು 11 ಪ್ರಮುಖ ‘G’ ಮಾದರಿ ಆರ್ಥಿಕ ಪ್ರಮೇಯಗಳನ್ನು ಘೋಷಿಸಿದೆ. ಇದರಲ್ಲಿ ‘ಗ್ಯಾರಂಟಿ ಎಕಾನಮಿ’, ‘ಗ್ರಾಸ್ ರೂಟ್ ಎಕಾನಮಿ’ (ಕೃಷಿ), ‘ಗ್ರೀನ್ ಎಕಾನಮಿ’ […]

​ಶಿವಮೊಗ್ಗದಲ್ಲಿ ಮಾದಕ ವಸ್ತುಗಳೇ ದುರ್ಘಟನೆಗೆ ಮೂಲ: ಶಾಸಕ ಚನ್ನಬಸಪ್ಪ

​ಶಿವಮೊಗ್ಗದಲ್ಲಿ ಮಾದಕ ವಸ್ತುಗಳೇ ದುರ್ಘಟನೆಗೆ ಮೂಲ: ಶಾಸಕ ಚನ್ನಬಸಪ್ಪ ಕಳವಳ ಶಿವಮೊಗ್ಗ ​ನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ದುರ್ಘಟನೆಗಳಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳು ಮಾದಕ ವಸ್ತುಗಳನ್ನು ಸೇವಿಸುತ್ತಿರುವುದೇ ಮುಖ್ಯ ಕಾರಣ ಎಂದು ಶಾಸಕ ಚನ್ನಬಸಪ್ಪ ಗಂಭೀರ ಆರೋಪ ಮಾಡಿದ್ದಾರೆ. ​ನಗರದಲ್ಲಿ ಮಾತನಾಡಿದ ಅವರು, ಗಾಂಜಾ ಸೇವನೆಯಂತಹ ದುಷ್ಕೃತ್ಯಗಳಲ್ಲಿ ತೊಡಗಿರುವ ಬಾಲಾಪರಾಧಿಗಳಲ್ಲಿ ಹೆಚ್ಚಿನವರು 10ನೇ ತರಗತಿ ಮುಗಿಸಿದವರಾಗಿದ್ದಾರೆ. ಇನ್ನೂ ಕೆಲವರು 8 ಮತ್ತು 9ನೇ ತರಗತಿಯಲ್ಲಿ ಉತ್ತೀರ್ಣರಾಗದೆ ಶಾಲೆಯಿಂದ ಹೊರಬಂದವರಾಗಿದ್ದು, ಇಂತಹ ಘಟನೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು. […]

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ‘ಹೈಟೆಕ್’ ಸ್ಪರ್ಶ: ರಾತ್ರಿ ಹಾರಾಟಕ್ಕೆ ಹಾದಿ ಸುಗಮ

ಶಿವಮೊಗ್ಗ ​ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವತ್ತ ಮಹತ್ವದ ಹೆಜ್ಜೆ ಇರಿಸಿದೆ. ವಿಮಾನಗಳ ಸುರಕ್ಷಿತ ಸಂಚಾರ ಹಾಗೂ ರಾತ್ರಿ ವೇಳೆ ಇಳಿಯಲು ಪೂರಕವಾದ ತಾಂತ್ರಿಕ ಕಾಮಗಾರಿಗಳು ಈಗ ವೇಗ ಪಡೆದುಕೊಂಡಿವೆ. ​ಮಣ್ಣು ಪರೀಕ್ಷೆ ಯಶಸ್ವಿ​ವಿಮಾನ ನಿಲ್ದಾಣದ ಸೋಗಾನೆ ಆವರಣದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದ ಮಣ್ಣಿನ ಸ್ಥಿರತೆ ಪರೀಕ್ಷೆ (Soil Stability Test) ವರದಿ ಈಗ ಬಂದಿದ್ದು, ಭೂಮಿಯ ದೃಢತೆ ತಾಂತ್ರಿಕ ಉಪಕರಣಗಳ ಅಳವಡಿಕೆಗೆ ಪೂರಕವಾಗಿದೆ ಎಂದು ದೃಢಪಟ್ಟಿದೆ. ಭಾರೀ […]