ವಿದ್ಯುತ್ ಕಡಿತ ಖಂಡಿಸಿ ಯುವ ಕಾಂಗ್ರೆಸ್’ನಿಂದ ಮೇಸ್ಕಾಂ ಕಛೇರಿ ಎದುರು ಪ್ರತಿಭಟನೆ..!

ವಿದ್ಯುತ್ ಕಡಿತ ಖಂಡಿಸಿ ಯುವ ಕಾಂಗ್ರೆಸ್’ನಿಂದ ಮೇಸ್ಕಾಂ ಕಛೇರಿ ಎದುರು ಪ್ರತಿಭಟನೆ..!
Facebook
Twitter
LinkedIn
WhatsApp

ಶಿಕಾರಿಪುರ ತಾಲೂಕಿನಲ್ಲಿ ಮೇಸ್ಕಾಂ ಇಲಾಖೆ ನಿರ್ವಹಣೆ ನೆಪದಲ್ಲಿ ಪದೇ ಪದೇ ಭಾನುವಾರ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿ
ಪಟ್ಟಣದ ಮೇಸ್ಕಾಂ ಕಛೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ‌ ವೇಳೆ‌ ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ್ ಮಾತನಾಡಿ ಮೇಸ್ಕಾಂ ಇಲಾಖೆ ನಿರ್ವಹಣೆ ಮಾಡುವ ನೆಪದಲ್ಲಿ ಭಾನುವಾರ 10 ಗಂಟೆಗೆ ವಿದ್ಯುತ್ ತೆಗೆದರೆ ರಾತ್ರಿ 7-8 ಗಂಟೆಗೆ ಕೊಡುತ್ತಿದ್ದಾರೆ.

ಇದರಿಂದ ತಾಲೂಕಿನ ಜನತೆಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು ಅಧಿಕಾರಿಗಳು ಕೂಡಲೇ ಈ ಕುರಿತು ಗಮನ ನೀಡಬೇಕು ಎಂದರು ಆಗ್ರಹಿಸಿದರು.

ಈ‌‌ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಯ್ಕ್ ಮುಖಂಡರಾದ ಭಂಡಾರಿ ಮಾಲತೇಶ್, ಶಿವು, ಸುನೀಲ್ ಇದ್ದರು.

News by: Raghu Shikari-7411515737