ಶಿಕಾರಿಪುರ: ವಾಲ್ಮಿಕಿ ನೌಕರರ ಸಂಘದ ವತಿಯಿಂದ ನಿವೃತ ನೌಕರರಿಗೆ ಸನ್ಮಾನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಅಯೋಜನೆ..!
ಶಿಕಾರಿಪುರ ಪಟ್ಟಣ ಪತ್ರಿಕಾ ಭವನದಲ್ಲಿ ಗುರುವಾರ ತಾಲೂಕ್ ಮಹರ್ಷಿ ವಾಲ್ಮಿಕಿ ಸಮಾಜ ಸಂಘ ಮತ್ತು ಪರಿಶಿಷ್ಟ ಪಂಗಡಗಳ ನೌಕರ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯನ್ನು ನಡೆಸಿ ನಿವೃತ ನೌಕರರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಅಯೋಜಿಲಾಗಿದೆ ಎಂದು ಅಧ್ಯಕ್ಷರಾದ ಮಲ್ಲಿಕಾರ್ಜುನ ತಿಳಿಸಿದರು.
ಈ ಕರಿತು ಮಾತನಾಡಿದ ಅವರು ನಮ್ಮ ಸಂಘದ ವತಿಯಿಂದ ವಾಲ್ಮಿಕಿ ಸಮಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆದ ವಿದ್ಯಾ ಪ್ರತಿಭ ಪುರಸ್ಕಾರ ಮತ್ತು ಸರ್ಕಾರಿ ಸೇವೆ ಸಲ್ಲಿಸಿ ನಿವೃತರಾದ ನಿವೃತ ನೌಕರರಿಗೆ ಸನ್ಮಾನ ಸಮಾರಂಭವನ್ನು ಸೆ.29/09/2021 ರ ಭಾನುವಾರದಂದು ಸುರಭಿ ಭವನಲ್ಲಿ ಕಾರ್ಯಕ್ರಮವನ್ನು ಆಯೋಜಿಲಾಗಿದೆ.
ಈ ಕಾರ್ಯಕ್ರಮಕ್ಕೆ ಸಮಾಜದ ಭಾಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಮಾಡಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಪ್ಪ, ಸೋಮಶೇಖರ, ಪ್ರಕಾಶ್, ಶಂಕರ್, ಸಂದೀಪ್, ನಾಗಪ್ಪ, ಇದ್ದರು.
News By: Raghu Shikari-7411515737