ಶಿವಮೊಗ್ಗ ಲೋಕಸಭಾ ಚುನಾವಣಾ ಫಲಿತಾಂಶ ಪೂರ್ವ ಕಾಂಗ್ರೆಸ್-ಬಿಜೆಪಿ ಬೆಟ್ಟಿಂಗ್:ಬಿಳುವುದೇ ಕಡಿವಾಣ..?
![ಶಿವಮೊಗ್ಗ ಲೋಕಸಭಾ ಚುನಾವಣಾ ಫಲಿತಾಂಶ ಪೂರ್ವ ಕಾಂಗ್ರೆಸ್-ಬಿಜೆಪಿ ಬೆಟ್ಟಿಂಗ್:ಬಿಳುವುದೇ ಕಡಿವಾಣ..?](https://shikarinews.com/wp-content/uploads/2024/05/IMG-20240515-WA0016.jpg)
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಮುಕ್ತಾಯವಾಗಿದ್ದು ಫಲಿತಾಂಶ ಇನ್ನೂ ಜೂ.4 ರಂದು ಹೊರಬಿಳಲಿದ್ದು ಸಾರ್ವಜನಿಕರಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.
ಬಿ.ಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತ ನಡುವೆ ಸಾವಲು ಜೋರಾಗಿದೆ.
ತಾಲೂಕಿನ ಕಲ್ಮನೆ ಗ್ರಾಮದ ರವೀಂದ್ರ ಎಂಬವರು ವಿಡಿಯೋ ಹರಿಬಿಟ್ಟು ಗೀತಾ ಶಿವರಾಜ್ ಕುಮಾರ್ ಗೆಲ್ಲುತ್ತಾರೆ. ಯಾರಾದರೂ ಚಾಲೆಂಜ್ ಮಾಡುವುದಾದರೆ ಬನ್ನಿ ಟ್ರ್ಯಾಕ್ಟರ್ ಪಣಕಿಟ್ಟಿದ್ದಾರೆ.
ಈ ಕುರಿತು ಬಿಜೆಪಿಯ ಯುವ ಮುಖಂಡ ಮಂಜುನಾಥ್ ಜಮೀನ್ದಾರ್ ಟ್ರ್ಯಾಕ್ಟರ್ ಚಾಲೆಂಜ್ ಬಗ್ಗೆ ಸ್ವೀಕರಿಸಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ,ಗೆಲ್ಲುತ್ತಾರೆ. ಸವಾಲನ್ನು ಸ್ವೀಕರಿಸುತ್ತೇವೆ.
ಬಿವೈ ರಾಘವೇಂದ್ರ ಗೆಲ್ಲುತ್ತಾರೆ ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದೇವಾಸ್ಥಾನದ ಮುಂದೆ ಟ್ರ್ಯಾಕ್ಟರ್ ನಿಲ್ಲಿಸಿಕೊಂಡು ಚಾಲೆಂಜ್ ಮಾಡೋಣ ಯಾರ್ ಅದ್ರು ಇದ್ರೆ ಬನ್ನಿ ಎನ್ನುವ ಮೂಲಕ ಒಪನ್ ಚೆಲೆಂಜ್ ಹಾಕಿದ್ದಾರೆ.
ರಾಜ್ಯದಲ್ಲಿ ಬೆಟ್ಟಿಂಗ್ (ಜೂಜು) ನಿಷೇಧ ಇದ್ದು ನೀತಿ ಸಂಹಿತೆ ಜಾರಿ ಇದ್ದರೂ ಕೂಡ ಬೆಟ್ಟಿಂಗ್ ಸಂಬಂಧಿಸಿದಂತೆ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರು ಚುನಾವಣಾ ಆಯೋಗ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಈ ರೀತಿಯ ಬೆಟ್ಟಿಂಗ್ ಗಳಿಗೆ ಕಡಿವಾಣ ಹಾಕಬೇಕಾಗಿದೆ.