ಶಿಕಾರಿಪುರ: ತಾಲ್ಲೂಕು ಮಾದಿಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ..!
ಮಂಗಳವಾರ ಪಟ್ಟಣದ ಪತ್ರಿಕಾ ಭವನದಲ್ಲಿ ತಾಲೂಕು ಮಾದಿಗ ಸಮಾಜದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಮಾಜದ ಮುಖಂಡರ ಎಲ್ಲಾ ಸೇರಿ ಪೂರ್ವಭಾವಿ ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧ್ಯಕ್ಷರನ್ನಾಗಿ ಪ್ರಕಾಶ್ ಇಟಿಗಿಹಳ್ಳಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದರು.
ತಾಲ್ಲೂಕಿನ ಮಾದಿಗ ಸಮುದಾಯದ ಎಲ್ಲಾ ಮುಖಂಡರು ಸೇರಿ ಬಸವರಾಜ್ ರೋಟೆ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದ್ದು
ಗೌರವ ಅಧ್ಯಕ್ಷರಾಗಿ ಚಂದ್ರಪ್ಪ ಡಿಎಸ್ಎಸ್ ಅಂಬೇಡ್ಕರ್ ನಗರ ಶಿಕಾರಿಪುರ,ಇನ್ನೊರ್ವ ಗೌರವ ಅಧ್ಯಕ್ಷರಾಗಿ ಹೊಳಿಯಪ್ಪ ಗಾಮ, ಅಧ್ಯಕ್ಷರಾಗಿ ಪ್ರಕಾಶ್ ಎಂ ವೈ ಇಟಿಗಿಹಳ್ಳಿ, ಉಪಾಧ್ಯಕ್ಷರಾಗಿ ಬಸವರಾಜ್ ಮುಗಳಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ಕಾಗಿನಲ್ಲಿ, ಮಹಿಳಾ ಅಧ್ಯಕ್ಷೆಯಾಗಿ ಚಂದ್ರಕಲಾ ಈಸೂರು, ಮಹಿಳಾ ಉಪಾಧ್ಯಕ್ಷೆಯಾಗಿ ರೇಣುಕಮ್ಮ ಚೀಕ್ಕಾಪುರ, ಕಾನೂನು ಸಲಹೆಗಾರರಾಗಿ ನಿಂಗಪ್ಪ ವಕೀಲರು ಶಿಕಾರಿಪುರ, ಮತ್ತು ರವಿಕುಮಾರ್ ಈಸೂರು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಡಿಎಸ್ಎಸ್ ಮುಖಂಡ ಜಗದೀಶ್
ಸಮಾಜದ ವತಿಯಿಂದ ಜನ ಸಂಖ್ಯೆಯ ಅಧ್ಯಯನ ಮಾಡಿ ಅರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಸೌಲಭ್ಯ ಕಲ್ಪಿಸಲಾಗುವುದು ಮತ್ತು ತಾಲೂಕಿನಲ್ಲಿ ನಮ್ಮ ಸಮಾಜದ ರಾಜಕೀಯ ಸ್ಥಾನ ಮಾನ ದೊರೆಕಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುದು.
ಅತ್ಯಂತ ಪ್ರಮುಖವಾಗಿ ಒಳ ಮೀಸಲಾತಿ ನೀಡುವ ಸದಾಶಿವ ಆಯೋಗ ಜಾರಿ ಕುರಿತು ಹೋರಾಟಗಳನ್ನು ನಡೆಸಲಾಗುವುದು ಈಗಾಗಲೇ ವಿಧಾನಸೌದದಲ್ಲಿ ಅಧಿವೇಶನ ನಡೆಯುತ್ತಿದ್ದು ಒಂದು ದಿನ ಸದಾಶಿವ ಆಯೋಗದ ಸಾಧಕಬಾದಕಗಳ ಕುರಿತು ಚರ್ಚೆ ನಡೆಸಬೇಕಾಗಿದೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪ್ರಕಾಶ್ ಇಟಿಗಿಹಳ್ಳಿ, ಉಪಾಧ್ಯಕ್ಷ ಬಸವರಾಜ್ ಮುಗಳಗೇರಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಕಾಗಿನಲ್ಲಿ,ಡಿಎಸ್ಎಸ್ ಮುಖಂಡ ಜಗದೀಶ್ ಚುರ್ಚಗುಂಡಿ ಮತ್ತಿತರರು ಇದ್ದರು.
News by: Raghu Shikari-7411515737