ಶಿಕಾರಿಪುರ :ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವರ್ಷ ಕಳೆದರು ಸಬ್ಸಿಡಿ ಹಣ ಬಿಡುಗಡೆಯಾಗಿಲ್ಲ: ನಾಗರಾಜ ಗೌಡ ಆರೋಪ..!
ಶಿಕಾರಿಪುರ : ರೈತರು ತೋಟಗಾರಿಕೆ ಇಲಾಖೆ ವತಿಯಿಂದ ಹನಿ ನೀರಾವರಿ ಅರ್ಜಿ ಸಲ್ಲಿಸುದ್ದು ಫಲಾನುಭವಿಗಳಿಗೆ ಇನ್ನೂ ಬಿಡುಗಡೆಯಾಗಿಲ್ಲ ಎಂದು ಪುರಸಭಾ ಸದಸ್ಯ ನಾಗರಾಜ್ ಗೌಡ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ರೈತರ ಸಾಲ ಮಾಡಿಕೊಂಡು ಅಡಿಕೆ ಸಸಿಗಳಿಗೆ ಬೆಳಸಿದ್ದು ಸರ್ಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡದೇ ಇರುವುದು ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ.
ತಾಲೂಕಿನ 225 ಜನರಿಗೆ ರೈತರು ಅರ್ಜಿ ಸಲ್ಲಿಸಿದ್ದು ವರ್ಷ ಕಳೆದರು ಹಣ ಬಿಡುಗಡೆ ಮಾಡಿಲ್ಲ ಅದರಿಂದ ಅದಷ್ಟು ಬೇಗ ಹಣವನ್ನು ಬಿಡುಗಡೆ ಮಾಡಬೇಕಾಗಿ ಒತ್ತಾಯಿಸಿದರು.
ಶಿಕಾಶಿಕಾರಿಪುರ ಪಟ್ಟಣದಪುರಸಭೆ ಈಸ್ವತ್ತು ಬಹು ದೊಡ್ಡ ಸಮಸ್ಯೆಯಾಗಿದೆ ಈ ಬಗ್ಗೆ ಯಾವುದೇ ರೀತಿಯ ಪರಿಹಾರ ಸರ್ಕಾರ ಇಂದಿಗೂ ತೆಗೆದುಕೊಂಡಿಲ್ಲ.
ಸಾಲೂರು ರಸ್ತೆಯಲ್ಲಿ ಬಡಾವಣೆ ನಿರ್ಮಾಣವಾಗಿದ್ದು ರಸ್ತೆಯ ಬದಿಯಲ್ಲಿ ಬೀದಿ ದೀಪ ಅಳವಡಿಸಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ ಮುಖ್ಯರಸ್ತೆಯಾಗಿರುವುರಿಂದ ಸಾಕಷ್ಟು ಜನ ಸಂದಣಿ ವ್ಯಾಪಾರ ವಹಿವಾಟು ನಡೆಸುವ ರಸ್ತೆಯಾಗಿದ್ದು ಬೀದಿ ದೀಪ ಅವಳಡಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರೋಷನ್, ರೈತ ಮುಖಂಡ ರಾಜಪ್ಪ ಮತ್ತಿತರರು ಇದ್ದರು.
News By: Raghu Shikari-7411515737