ಶಿಕಾರಿಪುರ: ಪಟ್ಟಣ ವಿವಿಧ ವಾರ್ಡ್’ಗಳ ಅಭಿವೃದ್ಧಿ ಕಾಮಗಾರಿಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ..!

ಶಿಕಾರಿಪುರ: ಪಟ್ಟಣ ವಿವಿಧ ವಾರ್ಡ್’ಗಳ ಅಭಿವೃದ್ಧಿ ಕಾಮಗಾರಿಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ..!

ಶಿಕಾರಿಪುರ ಪಟ್ಟಣದಲ್ಲಿ ಗುರುವಾರ ಚನ್ನಕೇಶವ ಮತ್ತು ಜಯನಗರ ಕುಂಬಾರಗುಂಡಿಗಳಲ್ಲಿ ಕೊಳಚೆ ಪ್ರದೇಶಗಳ ಕಾಂಕ್ರಿಟ್ ರಸ್ತೆ, ಚರಂಡಿ ಅಡ್ಡ ಮೋರಿ ನಿರ್ಮಾಣ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಸಂಸದರಾದ ಬಿ.ವೈ ರಾಘವೇಂದ್ರ ಅವರು ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ಪಟ್ಟಣದ ಚನ್ನಕೇಶವನಗರ 200ಮೀ ರಸ್ತೆ ಕಾಮಗಾರಿ ಮತ್ತು ಜಯನಗರ : 543 ಮೀ ರಸ್ತೆ, 350 ಮೀ ಚರಂಡಿ ಹಾಗೂ ಕುಂಬಾರ ಗುಂಡಿ : 150 ರಸ್ತೆ, 160 ಮೀ ಚರಂಡಿ, 2 ಅಡ್ಡ ಮೋರಿ ಕಾಮಗಾರಿಯ ಒಟ್ಟು ವೆಚ್ಚ – 1 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ,ಉಪಾಧ್ಯಕ್ಷ ಸಾಧೀಕ್, ಸ್ಥಾಯಿ ಅಧ್ಯಕ್ಷ ರೇಣುಕಸ್ವಾಮಿ, ಸದಸ್ಯರಾದ ರಮೇಶ್ ಗುಂಡ,ಪಾಲಕ್ಷಪ್ಪ, ಶಿವನಗೌಡ , ದೇವೇಂದ್ರಪ್ಪ‌ ಮುಖ್ಯಾಧಿಕಾರಿ ಸುರೇಶ್ ಮತ್ತಿತರರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!