ಶಿಕಾರಿಪುರ: ಪಟ್ಟಣ ವಿವಿಧ ವಾರ್ಡ್’ಗಳ ಅಭಿವೃದ್ಧಿ ಕಾಮಗಾರಿಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ..!
![ಶಿಕಾರಿಪುರ: ಪಟ್ಟಣ ವಿವಿಧ ವಾರ್ಡ್’ಗಳ ಅಭಿವೃದ್ಧಿ ಕಾಮಗಾರಿಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ..!](https://shikarinews.com/wp-content/uploads/2021/09/IMG-20210923-WA0006.jpg)
ಶಿಕಾರಿಪುರ ಪಟ್ಟಣದಲ್ಲಿ ಗುರುವಾರ ಚನ್ನಕೇಶವ ಮತ್ತು ಜಯನಗರ ಕುಂಬಾರಗುಂಡಿಗಳಲ್ಲಿ ಕೊಳಚೆ ಪ್ರದೇಶಗಳ ಕಾಂಕ್ರಿಟ್ ರಸ್ತೆ, ಚರಂಡಿ ಅಡ್ಡ ಮೋರಿ ನಿರ್ಮಾಣ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಸಂಸದರಾದ ಬಿ.ವೈ ರಾಘವೇಂದ್ರ ಅವರು ನೆರವೇರಿಸಿದರು.
![](https://shikarinews.com/wp-content/uploads/2021/09/IMG-20210923-WA0005-1024x682.jpg)
ಈ ವೇಳೆ ಮಾತನಾಡಿದ ಅವರು ಪಟ್ಟಣದ ಚನ್ನಕೇಶವನಗರ 200ಮೀ ರಸ್ತೆ ಕಾಮಗಾರಿ ಮತ್ತು ಜಯನಗರ : 543 ಮೀ ರಸ್ತೆ, 350 ಮೀ ಚರಂಡಿ ಹಾಗೂ ಕುಂಬಾರ ಗುಂಡಿ : 150 ರಸ್ತೆ, 160 ಮೀ ಚರಂಡಿ, 2 ಅಡ್ಡ ಮೋರಿ ಕಾಮಗಾರಿಯ ಒಟ್ಟು ವೆಚ್ಚ – 1 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು.
![](https://shikarinews.com/wp-content/uploads/2021/09/IMG-20210923-WA0003-1024x682.jpg)
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ,ಉಪಾಧ್ಯಕ್ಷ ಸಾಧೀಕ್, ಸ್ಥಾಯಿ ಅಧ್ಯಕ್ಷ ರೇಣುಕಸ್ವಾಮಿ, ಸದಸ್ಯರಾದ ರಮೇಶ್ ಗುಂಡ,ಪಾಲಕ್ಷಪ್ಪ, ಶಿವನಗೌಡ , ದೇವೇಂದ್ರಪ್ಪ ಮುಖ್ಯಾಧಿಕಾರಿ ಸುರೇಶ್ ಮತ್ತಿತರರು ಇದ್ದರು.
![](https://shikarinews.com/wp-content/uploads/2021/09/IMG_20210825_185201_020.jpg)
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
News by: Raghu Shikari-7411515737