ಆಕಾಶವಾಣಿಗೆ ಎಫ್‌.ಎಂ ಸಂಜೀವಿನಿ; 8 ಜಿಲ್ಲೆಗಳಿಗೆ ಪ್ರಸಾರ ವ್ಯಾಪ್ತಿ ವಿಸ್ತರಣೆ:ಸಚಿವ ಮುರಗನ್​

ಆಕಾಶವಾಣಿಗೆ ಎಫ್‌.ಎಂ ಸಂಜೀವಿನಿ; 8 ಜಿಲ್ಲೆಗಳಿಗೆ ಪ್ರಸಾರ ವ್ಯಾಪ್ತಿ ವಿಸ್ತರಣೆ:ಸಚಿವ ಮುರಗನ್​
Facebook
Twitter
LinkedIn
WhatsApp


ಶಿವಮೊಗ್ಗ ರೇಡಿಯೋ ಇಂದಿಗೂ ಅತ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದ್ದು, ಭದ್ರಾವತಿ ಆಕಾಶವಾಣಿಗೆ ಹೈ-ಟೆಕ್ ಎಫ್‌.ಎಂ ಪ್ರೇಷಕ ಅಳವಡಿಸುವ ಮೂಲಕ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ದೃಢ ಹೆಜ್ಜೆ ಇಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ತಿಳಿಸಿದರು.

ಶಿವಮೊಗ್ಗ ​ನಗರದ ವಿದ್ಯಾನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಭದ್ರಾವತಿ ಆಕಾಶವಾಣಿಯ ನೂತನ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಕೋಟಿ ಜನರಿಗೆ ಶ್ರವಣಾನಂದ ಭದ್ರಾವತಿ ಆಕಾಶವಾಣಿಗೆ ಇದೊಂದು ವಿಶೇಷ ಉಡುಗೊರೆ. ಈ ನೂತನ ತಂತ್ರಜ್ಞಾನದಿಂದಾಗಿ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ 8 ಜಿಲ್ಲೆಗಳ ಸುಮಾರು 1 ಕೋಟಿ ಜನರಿಗೆ ಸ್ಪಷ್ಟವಾದ ರೇಡಿಯೋ ಸಂಕೇತಗಳು ಲಭ್ಯವಾಗಲಿವೆ.

ದೇಶದ ಶೇ 92ರಷ್ಟು ಭಾಗವನ್ನು ತಲುಪುತ್ತಿರುವ ರೇಡಿಯೋ, ಆಧುನಿಕ ಕಾಲದಲ್ಲೂ ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿದೆ’ ಎಂದು ಸಚಿವರು ಬಣ್ಣಿಸಿದರು.ಕೇಂದ್ರ ಸರ್ಕಾರವು ಡಿಜಿಟಲ್ ಮೂಲಸೌಕರ್ಯ ವೃದ್ಧಿಗಾಗಿ ₹2,000 ಕೋಟಿ ವ್ಯಯಿಸುತ್ತಿದ್ದು, ಕಲೆ, ಸಂಸ್ಕೃತಿ ಮತ್ತು ಸಾಫ್ಟ್‌ವೇರ್ ಒಳಗೊಂಡ ‘ಆರೆಂಜ್ ಎಕಾನಮಿ’ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಭಾಗವಾಗಿ 25 ಸಾವಿರ ಶಾಲೆಗಳಿಗೆ ‘ಕ್ರಿಯೇಟಿವ್ ಲ್ಯಾಬ್’ ನೀಡಲಾಗುತ್ತಿದೆ ಎಂದರು.

​ವಜ್ರ ಮಹೋತ್ಸವದ ಸಂಭ್ರಮಕ್ಕೆ ಎಫ್‌.ಎಂ ಕಳೆ ​ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಭದ್ರಾವತಿ ಆಕಾಶವಾಣಿಯ ವಜ್ರ ಮಹೋತ್ಸವದ ಸಂದರ್ಭದಲ್ಲೇ ಈ ಎಫ್‌.ಎಂ ಸೌಲಭ್ಯ ದೊರೆತಿರುವುದು ಸಂತಸದ ವಿಷಯ. 2024ರ ಜನವರಿಯಲ್ಲಿ ಇದಕ್ಕೆ ಅಡಿಗಲ್ಲು ಹಾಕಲಾಗಿತ್ತು, ಈಗ ಅದು ಸಾಕಾರಗೊಂಡಿದೆ. ವಿದ್ಯಾನಗರದ 150 ಮೀಟರ್ ಎತ್ತರದ ದೂರದರ್ಶನ ಟವರ್ ಬಳಸಿಕೊಂಡು 101.4 ಮೆಗಾ ಹರ್ಟ್ಸ್ (MHz) ತರಂಗಾಂತರದಲ್ಲಿ ಪ್ರಸಾರ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

​ಪಾರ್ಕ್‌ಗಳಲ್ಲಿ ರೇಡಿಯೋ: ನಗರದ ಪ್ರಮುಖ ಉದ್ಯಾನವನಗಳಲ್ಲಿ (ಪಾರ್ಕ್) ರೇಡಿಯೋ ಸ್ಟೇಷನ್ ಅಳವಡಿಸಲು ಕೇಂದ್ರ ಸಚಿವರು ಒಪ್ಪಿಗೆ ಸೂಚಿಸಿರುವುದು ಶ್ಲಾಘನೀಯ ಎಂದು ಸಂಸದರು ಇದೇ ವೇಳೆ ತಿಳಿಸಿದರು.

News by: Raghu Shikari-7411515737