ಶಿಕಾರಿಪುರ : ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಟ್ಯಾಕ್ಸಿ ಚಾಲಕರ ಸಂಘಟನೆಯಿಂದ ಮನವಿ..!
ಶಿಕಾರಿಪುರ :ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸರ್ ಇದರ ವತಿಯಿಂದ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಎದುರು ವೈಟ್ ಬೋರ್ಡ್ ಕಳ್ಳ ಟ್ಯಾಕ್ಸಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಕಾರ್ತಿಕ್ ಶೆಟ್ಟಿ ಮಾತನಾಡಿ ದಿನೇದಿನೇ ರಾಜ್ಯದಲ್ಲಿ ವೈಟ್ ಬೋರ್ಡ್ ಕಳ್ಳ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ನಡೆದ ಅನಾಹುತಗಳಿಗೆ ಕೆಲವೊಂದು ಘಟನೆಗಳು ಇದಕ್ಕೆ ಸಾಕ್ಷಿ ಆಗಿದೆ.
ಸರಕಾರಕ್ಕೆ ತೆರಿಗೆ ವಂಚಿಸಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಮಾಲೀಕರು ಇನ್ನಾದರೂ ಎಚ್ಚೆತ್ತುಕೊಂಡು ತಮ್ಮ ವಾಹನಗಳನ್ನು ಹಳದಿ ಬೋರ್ಡ್ ಆಗಿ ಪರಿವರ್ತನೆ ಮಾಡಿಕೊಂಡು ದುಡಿಮೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಧ್ಯಕ್ಷ ಉಮೇಶ್, ಉಪಾಧ್ಯಕ್ಷ ನಾಗರಾಜ, ಕಾರ್ಯದರ್ಶಿ ಅವಿನಾಶ್ ಸಾಗರ, ಕೋಶಾಧಿಕಾರಿ ದೊರೆ ಹೊನ್ನಾಳಿ
ಕಾರ್ಯದರ್ಶಿ ಅರುಣ್ , ಕೃಷ್ಣಮೂರ್ತಿ ಮಾಲತೇಶ್, ಸಿದ್ದೇಶ್ ವೀರೇಶ್ ಗಿರೀಶ್ ರಫೀಕ್ ಪ್ರವೀಣ್, ಮತ್ತಿತರರು ಇದ್ದರು.
News By: Raghu Shikari-7411515737