ಶಿಕಾರಿಪುರ: ಮಹರ್ಷಿ ವಾಲ್ಮಿಕಿ ಆದರ್ಶ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕಿದೆ: ಕೆ.ಎಸ್‌ ಗುರುಮೂರ್ತಿ

ಶಿಕಾರಿಪುರ: ಮಹರ್ಷಿ ವಾಲ್ಮಿಕಿ ಆದರ್ಶ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕಿದೆ: ಕೆ.ಎಸ್‌ ಗುರುಮೂರ್ತಿ

ಶಿಕಾರಿಪುರ: ಜ್ಞಾನವಂತ, ಗುಣವಂತ, ಸಂಸ್ಕಾರವಂತ ಯುವಕ, ಯುವತಿಯರು ದೇಶದ ನಿಜವಾದ ಆಸ್ತಿ ಅದಕ್ಕಾಗಿ ಪ್ರತಿಯೊಬ್ಬರೂ ವಾಲ್ಮೀಕಿ ಮಹರ್ಷಿ ಆದರ್ಶ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ತಾಲೂಕು ಆಡಳಿತ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕರ‍್ಯಕ್ರಮದಲ್ಲಿ ಅವರು ಮಾತನಾಡಿ ಅವರು ದೇಶದಲ್ಲಿನ ಶ್ರೀಮಂತರು, ಹಣ, ವಜ್ರ ವೈಡರ‍್ಯ ದೇಶದ ಆಸ್ತಿಯಲ್ಲ ಬದಲಿಗೆ ಸಂಸ್ಕಾರವಂತ ಯುವಜನತೆ ದೇಶಕ್ಕೆ ನಿಜವಾದ ಆಸ್ತಿಯಾಗುತ್ತಾರೆ ಅದಕ್ಕೆ ಮಕ್ಕಳಿಗೆ ಸಂಸ್ಕಾರ ನೀಡಬೇಕು ವಾಲ್ಮೀಕಿ ಮಹರ್ಷಿ ಬರೆದಿರುವ ರಾಮಾಯಣ ಗ್ರಂಥ ಇಡೀ ಜಗತ್ತು ಒಪ್ಪಿ ಮೆಚ್ಚಿದೆ ಅದರಲ್ಲಿನ ಜೀವನ ಆದರ್ಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.

ಹಿಂದೆ ಗರ್ಭವತಿಯರು ರಾಮಾಯಣ, ಮಹಾಭಾರತ ಸೇರಿ ಪುರಾಣ ಪುಣ್ಯ ಕಥೆ ಓದುತ್ತಿದ್ದರು ಅದು ಹೊಟ್ಟೆಯೊಳಗಿನ ಮಗುವಿಗೂ ಸಂಸ್ಕಾರ ದೊರೆಯುತ್ತದೆ ಎನ್ನುವ ಕಾರಣಕ್ಕೆ ಆದರೆ ಇಂದಿನ ಆಧುನಿಕ ಕಾಲದಲ್ಲಿ ಟಿವಿ, ಮೊಬೈಲ್‌ನಲ್ಲಿನ ಕೆಟ್ಟಿ ಸಂಗತಿಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿರುವುದು ವಿಪರ್ಯಾಸ.

ಹುಟ್ಟಿನಿಂದ ಯಾರೂ ಪರಿಚಯ ಆಗಲ್ಲ ಯಾವ ಹಾದಿಯಲ್ಲಿ ಅವರು ಬೆಳೆಯುತ್ತಾರೆ ಅವರಿಗೆ ಸಿಗುವ ಸಂಸ್ಕಾರ ಎತ್ತರಕ್ಕೆ ಬೆಳೆಯಲು ಕಾರಣವಾಗುತ್ತದೆ. ಕಾಲ ಬದಲಾಗಿದೆ ಎನ್ನುವುದು ಸರಿಯಲ್ಲ ಸರ‍್ಯ ಚಂದ್ರರು ಅದೇ ಹೊತ್ತಿಗೆ ದಿಕ್ಕಿನಲ್ಲಿ ಹುಟ್ಟಿ ಮುಳುಗುತ್ತಿದ್ದಾರೆ ನಮ್ಮ ಭಾವನೆ ಚಿಂತನೆ ಬದಲಾಯಿಸಿಕೊಳ್ಳಬೇಕು.

ಒಂದು ಒಳ್ಳೆ ಸಂಗತಿ ಸಾವಿರ ಕೆಟ್ಟ ಚಿಂತನೆ ಹೊಡೆದು ಹಾಕುತ್ತದೆ ಅದಕ್ಕಾಗಿ ಪ್ರತಿಬಾರಿ ಒಳ್ಳೆ ಚಿಂತನೆ ನಡೆಸಬೇಕು ಅದು ಉತ್ತಮ ಜೀವನಕ್ಕೆ, ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು.

ತಹಸೀಲ್ದಾರ್ ಎಂ.ಪಿ.ಕವಿರಾಜ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಎಚ್.ಹನುಮಂತಪ್ಪ, ಮುಖಂಡರುಗಳಾದ ಕೆ.ಹಾಲಪ್ಪ, ಎಚ್.ಟಿ.ಬಳಿಗಾರ್, ಸುರೇಶ್, ನಾಗರಾಜಗೌಡ ಗುಳೇದಹಳ್ಳಿ ಎಲ್ಲ ಇಲಾಖೆ‌ ಅಧಿಕಾರಿಗಳು, ಸಮಾಜದ ಮುಖಂಡರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!