ಶಿವಮೊಗ್ಗ: ತಾಳಗುಪ್ಪ- ಮೈಸೂರು, ಟಿಪ್ಪು ಎಕ್ಸ್ಪ್ರೆಸ್ ರೈಲುಗಳಿಗೆ ಹೊಸ ಹೆಸರು..!
![ಶಿವಮೊಗ್ಗ: ತಾಳಗುಪ್ಪ- ಮೈಸೂರು, ಟಿಪ್ಪು ಎಕ್ಸ್ಪ್ರೆಸ್ ರೈಲುಗಳಿಗೆ ಹೊಸ ಹೆಸರು..!](https://shikarinews.com/wp-content/uploads/2022/10/images-47.jpeg)
![](https://shikarinews.com/wp-content/uploads/2022/10/IMG-20221006-WA0153-1024x640.jpg)
ತಾಳಗುಪ್ಪ- ಮೈಸೂರು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಕುವೆಂಪು ಎಕ್ಸ್ಪ್ರೆಸ್ ಎಂದು ಹೆಸರಿಡಲಾಗಿದೆ.
ಶಿವಮೊಗ್ಗದ ಸಂಸದ ಬಿವೈ ರಾಘವೇಂದ್ರ ಅವರು ನಾಡಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು ಅವರು ಪ್ರಯತ್ನದಿಂದ ತಾಳಗುಪ್ಪ -ಮೈಸೂರು ರೈಲಿಗೆ ಕುವೆಂಪು ಎಕ್ಸ್ಪ್ರೆಸ್ ಎಂದು ಹೆಸರಿಡಲಾಗಿದೆ.
![](https://shikarinews.com/wp-content/uploads/2022/10/images-46.jpeg)
ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಿಸಬೇಕು ಅನ್ನೋದು ಹಲವು ದಿನಗಳ ಬೇಡಿಕೆಯಾಗಿತ್ತು.
ಇದಕ್ಕೆ ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ನಡೆಸಿದ ಸತತ ಪ್ರಯತ್ನದಿಂದ ಇದೀಗ ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ.
![](https://shikarinews.com/wp-content/uploads/2022/10/images-51.jpeg)
ಟಿಪ್ಸು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಕೇಂದ್ರ ಸರ್ಕಾರ ಒಡೆಯರ್ ಎಕ್ಸ್ಪ್ರೆಸ್ ರೈಲು ಎಂದು ಮರುನಾಮಕರಣ ಮಾಡಿದೆ.
ಈ ಮೂಲಕ ಮೈಸೂರನ್ನು ಕಾಪಾಡಿದ, ಸಂಸ್ಕತಿಯನ್ನು ಉಳಿಸಿ ಬೆಳೆಸಿ, ವಿಶ್ವ ಪ್ರಸಿದ್ಧಿ ಮಾಡಿದ ಒಡೆಯರ್ ರಾಜಮನೆತನಕ್ಕೆ ಗೌರವ ನೀಡಿದೆ.
News by: Raghu Shikari-7411515737