ಶಿವಮೊಗ್ಗ ಜಿಲ್ಲೆಯಲ್ಲಿ ರೌಡಿಸಂ ಗಾಂಜಾ ಮಟ್ಟಹಾಕುವುದೇ ನಮ್ಮಗುರಿ: ಎಸ್ಪಿ ಮಿಥುನ್ ಕುಮಾರ್
![ಶಿವಮೊಗ್ಗ ಜಿಲ್ಲೆಯಲ್ಲಿ ರೌಡಿಸಂ ಗಾಂಜಾ ಮಟ್ಟಹಾಕುವುದೇ ನಮ್ಮಗುರಿ: ಎಸ್ಪಿ ಮಿಥುನ್ ಕುಮಾರ್](https://shikarinews.com/wp-content/uploads/2022/10/IMG-20221006-WA0153.jpg)
ಶಿವಮೊಗ್ಗ : ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನೂತನ ಎಎಸ್ಪಿ ಮಿಥುನ್ ಕುಮಾರ್ ಪತ್ರಿಕಾಗೋಷ್ಠಿಯನ್ನು ನಡೆಸಿ ಜಿಲ್ಲೆಯಾದ್ಯಂತ ರೌಡಿಸಂ ಮತ್ತು ಗಾಂಜಾ ಮಾಫೀಯ ಮಟ್ಟ ಹಾಕುವುದೇ ನಮ್ಮ ಗುರಿ ಎಂದರು.
![](https://shikarinews.com/wp-content/uploads/2022/10/IMG_20221007_090909_543.jpg)
ರೌಡಿ ಪಟ್ಟಿಯಲ್ಲಿ ಇರುವವರ ಮೇಲೆ ಪೋಲಿಸರು ನಿಗಾ ಇರಿಸಿದ್ದಾರೆ ರೌಡಿಸಂ ಬೆಳವಣಿಗೆಗಳು ನಡೆಯದಂತೆ ಜಾಗೃತಿ ವಹಿಸಲಾಗಿದೆ.
ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸಾರ್ವಜನಿಕರ ಮತ್ತು ಮಾಧ್ಯಮಗಳ ಸಹಕಾರ ಅಗತ್ಯವಾಗಿದ್ದು ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ನೇರವಾಗಿ ನಮಗೆ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಿದ್ದಾರೆ ತಕ್ಷಣ ಕ್ರಮ ಜರುಗಿಸಲಾಗುವುದು ಎಂದರು.
![](https://shikarinews.com/wp-content/uploads/2022/10/IMG_20221007_090847_639.jpg)
ಶಿವಮೊಗ್ಗ ಜಿಲ್ಲೆ ಸಾಂಸ್ಕೃತಿಕ ರಾಜಕೀಯ ಇತಿಹಾಸವನ್ನು ಹೊಂದಿರುವ ಜಿಲ್ಲೆಯಾಗಿದ್ದು ಈ ಜಿಲ್ಲೆಯಲ್ಲಿ ಇತ್ತೀಚೆಗೆ ಕೋಮುಗಲಭೆಗಳಾದಂತಹ ಪ್ರಕರಣಗಳು ಹೆಚ್ಚಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಮುಂಜಾಗ್ರತೆ ವಹಿಸಲಾಗಿದೆ ಆಯಾ ಸಂದರ್ಭದಲ್ಲಿ ನಡೆಯುವ ಸಣ್ಣ ಪುಟ್ಟ ಗಲಾಟೆಗಳಿಗೆ ಸಂದರ್ಭಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಎಸ್ಪಿ ವಿಕ್ರಂ , ಡಿವೈಎಸ್ಪಿ ಬಾಲರಾಜ್ ಇದ್ದರು.
News By: Raghu Shikari-7411515737