ಶಿಕಾರಿಪುರ:ಸ್ಮಶಾನಗಳಲ್ಲಿ ಅವ್ಯವಸ್ಥೆ ಶವ ಸುಡಲು ಜನರ ಪರದಾಟ…!

ಶಿಕಾರಿಪುರ:ಸ್ಮಶಾನಗಳಲ್ಲಿ ಅವ್ಯವಸ್ಥೆ ಶವ ಸುಡಲು ಜನರ ಪರದಾಟ…!

ಶಿಕಾರಿಪುರ ಪಟ್ಟಣದ ಹೊರವಲಯದಲ್ಲಿರುವ ಕುಮದ್ವತಿ ನದಿಯ ಬಳಿಯ ರುದ್ರಭೂಮಿಯಲ್ಲಿ ಶವವನ್ನು ಸುಡಲು ಸರಿಯಾದ ವ್ಯವಸ್ಥೆ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಹಾಸಿಗೆ ದಿಂಬು ಬಟ್ಟೆಗಳನ್ನು ಕುಟುಂಬ ರಸ್ತೆಯಲ್ಲೇ ಬಿಸಾಕುತ್ತಿದ್ದಾರೆ.

ಇನ್ನು ಸ್ಮಶಾನದ ಒಳಗೆ ರಸ್ತೆ ಸಂಪೂರ್ಣ ಗುಂಡಿಯಿಂದ ಮುಚ್ಚಿಹೋಗಿತ್ತು ರಸ್ತೆ ಮಧ್ಯೆ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದು ರಸ್ತೆಯ ಯಾವುದು ಗುಂಡಿ ಯಾವುದು ಎಂಬುದೇ ತಿಳಿಯದಾಗಿದೆ.

ಇನ್ನೂ ಶವವನ್ನು ಸುಡಲು ನಿರ್ಮಿಸಲಾಗಿರುವ ಕಬ್ಬಿಣದ ಕಂಬಿಗಳು ಸಂಪೂರ್ಣ ಮುರಿದು ಹೋಗಿದ್ದು ಕಟ್ಟಿಗೆಯಿಂದ ನೀಡಲು ಸರಿಯಾದ ವ್ಯವಸ್ಥೆಯಿಲ್ಲ ಇದರಿಂದ ಶವವನ್ನು ಸುಡಲು ಜನರು ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗಿದೆ.

ಪ್ರತಿವರ್ಷ ಪುರಸಭೆ ವತಿಯಿಂದ ಮುಕ್ತಿದಾಮ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಸ್ಮಶಾನಗಳ ಸ್ಥಿತಿಯನ್ನು ನೋಡಿದರೆ ಹಣ ಯಾವ ರೀತಿ ಬಳಕೆಯಾಗುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಮಶಾನಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮವನ್ನು ವಹಿಸಬೇಕಾಗಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!