ಶಿಕಾರಿಪುರ : ಮಳವಳ್ಳಿ ತಾಂಡದಲ್ಲಿ ಮನೆ ಮೇಲೆ ದಾಳಿ ಕಳ್ಳಭಟ್ಟಿ ವಶ..!
![ಶಿಕಾರಿಪುರ : ಮಳವಳ್ಳಿ ತಾಂಡದಲ್ಲಿ ಮನೆ ಮೇಲೆ ದಾಳಿ ಕಳ್ಳಭಟ್ಟಿ ವಶ..!](https://shikarinews.com/wp-content/uploads/2021/06/IMG-20210616-WA0020.jpg)
ಶಿಕಾರಿಪುರ ತಾಲೂಕಿನ ಮಳವಳ್ಳಿ ತಾಂಡದಲ್ಲಿ ಮಂಗಳವಾರ ಮುಂಸಂಜೆ ವೇಳೆ ಕ್ಯಾಪ್ಟನ್ ಅಜಿತ್ ಕುಮಾರ್ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕರು ಸಾಗರ ಉಪ ವಿಭಾಗ ನಿರ್ದೇಶನದಲ್ಲಿ ರಮೇಶ್ ಕೆ. ಹೆಚ್.ಅಬಕಾರಿ ನಿರೀಕ್ಷಕ ದಾಳಿ ನಡೆಸಿದ್ದಾರೆ.
![](https://shikarinews.com/wp-content/uploads/2021/06/IMG-20210616-WA0021-1024x768.jpg)
ಶಿಕಾರಿಪುರ ತಾಲ್ಲೂಕು ಮಳವಳ್ಳಿ ತಾಂಡದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಕುಮಾರ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳಭಟ್ಟಿ ತಯಾರಿಸುತ್ತಿರುವುದನ್ನು ಪತ್ತೆ ಹಚ್ಚಿ 03 ಲೀಟರ್ ಕಳ್ಳಭಟ್ಟಿ, ಹಾಗೂ ಪರಿಕರಗಳನ್ನು ಜಫ್ತುಡಿಸಿಕೊಂಡು ಮೊಕದ್ದಮೆ ದಾಖಲಿಸಿರುತ್ತಾರೆ.
ದಾಳಿಯ ಸಂದರ್ಭದಲ್ಲಿ ಉಪ ಆಯುಕ್ತರ ಕಚೇರಿಯ ನಿರೀಕ್ಷಕರಾದ ಹಾಲನಯ್ಕ್,ಸಿಬ್ಬಂದಿಗಳು ಶಿಕಾರಿಪುರ ವಲಯ ಕಚೇರಿಯ ಅಬಕಾರಿ ಕಾನ್ಸ್ಟೇಬಲ್ಸ್ ಗಳಾದ ಮಂಜುನಾಥ್, ಕನಕಪ್ಪ, ಹನುಮಂತಪ್ಪ ಬಸವರಾಜ್ ಸಿದ್ದಲಿಂಗಪ್ಪ ಇದ್ದರು.
News by: Raghu Shikari-7411515737