ಅತ್ಯಂತ ಶ್ರೇಷ್ಠ ಜಲ ಯಾವುದು..!

ಅತ್ಯಂತ ಶ್ರೇಷ್ಠ ಜಲ ಯಾವುದು..!

*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-

ಉಪಲಾಸ್ಫಾಲನ ಆಕ್ಷೇಪ ವಿಚ್ಛೇದೈಃ ಖೇದಿತೋದಕಾಃ ||9||
ಹಿಮವನ್ ಮಲಯೋದ್ಭೂತಾಃ ………|
ಅಷ್ಟಾಂಗ ಹೃದಯ, ಸೂತ್ರ ಸ್ಥಾನ ಅಧ್ಯಾಯ-5

ಹಿಮವನ್:

ಹಿಮಾಲಯ ಪರ್ವತದಲ್ಲಿ ಹುಟ್ಟುವ
ಮಲಯನ್: ಮಲಯ ಪರ್ವತದಲ್ಲಿ ಹುಟ್ಟುವ ನದಿಗಳ ನೀರು ಅತ್ಯಂತ ಶ್ರೇಷ್ಠ ಏಕೆಂದರೆ- ಆ ಜಲ
ಉಪಲಾಸ್ಫಾಲನ: ಬಂಡೆಗಳಿಂದ ಬೀಳುವುದು

ಆಕ್ಷೇಪ ವಿಚ್ಛೇದೈಃ: ಜಲದ ಪರಮಾಣುಗಳ ವಿಭಜನೆ ಯಾಗುವುದು

ಖೇದಿತ ಉದಕ: ಅಂಕುಡೊಂಕಾಗಿ ಬಂಡೆಗಳ ನಡುವೆ ಸೀಳಿ ಹರಿವ ನೀರು

ಕುಡಿಯಲು ಅತ್ಯಂತ ಶ್ರೇಷ್ಠ. ಇದನ್ನು ಗಂಗೋದಕ‌ ಎನ್ನುವರು(ಗಂಗಾ ನದಿಯ ಜಲ ಎಂಬ ಅರ್ಥವಲ್ಲ)

ಇನ್ನುಳಿದ ನೀರುಗಳು ಸಾಮುದ್ರಜಲ(ಸಮುದ್ರದ ಜಲ ಎಂಬ ಅರ್ಥವಲ್ಲ, ಎಷ್ಟೇ ಇದ್ದರೂ ಬಳಸಲು ಅಯೋಗ್ಯ ಎಂಬುದು ನಿಜವಾದ ಅರ್ಥ)

ಗಂಗೋದಕದ ವೈಜ್ಞಾನಿಕ ವಿವರಣೆ:

ಜಲವು ಅತ್ಯಂತ ಎತ್ತರದ ಮೇಲಿನಿಂದ ಬಂಡೆಗಳ ಮೇಲೆ ಬೀಳುವ ಕಾರಣ ಅದು ಆಕ್ಷೇಪ ವಿಚ್ಛೇದನ ಕ್ರಿಯೆಗೆ ಒಳಗಾಗಿ ತನ್ನ ಪರಮಾಣುವಿನ ಗಾತ್ರ ಕುಗ್ಗಿಸುವುದಲ್ಲದೇ, ಆಮ್ಲೀಯ ಗುಣವನ್ನು ಕಳೆದುಕೊಳ್ಳುತ್ತದೆ. ಇದು ವಿದ್ಯತ್ ಪೂರಣಗೊಂಡ ಜಲವಾಗಿ ಮಾರ್ಪಡುತ್ತದೆ. ಇದೇ ಕಾರಣದಿಂದ ಸಂಪರ್ಕಕ್ಕೆ ಬಂದ ಯಾವುದೇ ವಸ್ತು ಬೇಗ ಹಾಳಾಗುವುದಿಲ್ಲ, ಮನುಷ್ಯ ಕುಡಿದರೆ ಮುಪ್ಪು ಬೇಗ ಬರುವುದಿಲ್ಲ, antioxidant ಶಬ್ದ ಇಂದು ಇದು ಅತ್ಯಂತ ಪ್ರಚಲಿತ ವಿಷಯವಾಗಿದೆ. ಮತ್ತು ಜಲದ ಕಣಗಳ ಗಾತ್ರ ಅತ್ಯಂತ ಚಿಕ್ಕದಾಗುತ್ತದೆ.

ಉಪಯೋಗ ಏನು?
ಈ ಜಲ ಉಪಯೋಗಿಸಿದ ಮನುಷ್ಯನಿಗೆ ರೋಗಗಳ ಸಾಧ್ಯತೆ ಕಡಿಮೆ, ಮುಪ್ಪು ನಿಧಾನ, ಶರೀರದ ಆಪ್ ಧಾತು ಶ್ರೇಷ್ಠಮಟ್ಟದಲ್ಲಿರುವ ಕಾರಣ ಬೇಗ ಆಯಾಸಗೊಳ್ಳುವುದಿಲ್ಲ. pH balance ಕಾರಣದಿಂದ ಜೀವಕೋಶಗಳು ಆಮ್ಲೀಯತೆಯನ್ನು ಸಾಕಷ್ಟು ಕಳೆದುಕೊಳ್ಳುತ್ತವೆ.

ಈ ಕಾರಣಕ್ಕೇ ಹಿಮಾಲಯದಲ್ಲಿ ವಾಸಿಸುವ ಜನರು ಅತ್ಯಂತ ಆರೋಗ್ಯವಂತರು, ಬೆಟ್ಟ ಏರಿ ಇಳಿದರೂ ಆಯಾಸಗೊಳ್ಳರು. ನಾವು ಅಲ್ಲಿಗೆ ಹೋದಾಗ ಆ ನೀರಿನ ಪ್ರಭಾವದಿಂದ ಆಯಾಸಗೊಳ್ಳುವುದು ಕಡಿಮೆ.

ಈಗ ಈ ಜಲ ಸಿಗುತ್ತದೆಯೇ?
ಹೌದು ಪ್ರವಾಸಕ್ಕೆ ಹೋದಾಗ ತಂದುಕೊಳ್ಳಬಹುದು. ಮತ್ತು ಇತ್ತೀಚಿಗೆ ಕೆಲವು ಜಪಾನ್ ತಂತ್ರಜ್ಞಾನ ಎಂಬ ಹೆಸರಿನಲ್ಲಿ ಜಲವನ್ನು ವಿದ್ಯುತೀಕರಣ ಮಾಡುವ ವಾಟರ್ ಫಿಲ್ಟರ್ ಗಳು ಬರುತ್ತಿವೆ.

ನಾನು ಪ್ರತ್ಯಕ್ಷ ನೋಡಿದ ಉದಾಹರಣೆಯನ್ನು ಕೊಡುತ್ತೇನೆ, ಈ ರೀತಿ ವಿದ್ಯುತ್ ಕೃತ ಜಲವನ್ನು ಪ್ರಾಣಿಗಳು ಇಷ್ಟಪಟ್ಟು ಕುಡಿಯುತ್ತವೆ ಮತ್ತು ಪಕ್ಕದಲ್ಲೇ ನಮ್ಮ ಆರ್ ಒ ವಾಟರ್ ಇಟ್ಟರೂ ಅದನ್ನು ತ್ಯಜಿಸುತ್ತವೆ.

ನಮಗಿಂತ ಪ್ರಾಣಿಗಳ ಸಂವೇದನಾಶೀಲತೆ ನೂರುಪಟ್ಟು ಅಧಿಕವಲ್ಲವೇ?

ಆರ್ ಒ ಜಲಪಾನ ನಿಲ್ಲಿಸಿ, ಅದು ಜಲವಲ್ಲ ಆ್ಯಸಿಡ್!! ನಿಧಾನವಾಗಿ ನಮ್ಮನ್ನು ಸುಡುತ್ತದೆ.

Due to electrolysis(ಆಕ್ಷೇಪ ವಿಚ್ಛೇದೈಃ) of water molecules during falling down from high mountain get charged and having high hydrogen concentration called hingh pH value, reduction of oxidation property and reduce the size of water molecules….

ಇನ್ನೂ ಹೆಚ್ಚಿನ ಮಾಹಿತಿಗೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬಹುದು.

ಪ್ರೀತಿಯ ಬಂಧುಗಳೇ,

ಆಯುರ್ವೇದ ಸಲಹೆ:
ದಯಮಾಡಿ ನಿಮ್ಮ ಹಸಿವನ್ನು ಮತ್ತು ನಿಮ್ಮ ಆಹಾರವನ್ನು ಚನ್ನಾಗಿಟ್ಟುಕೊಳ್ಳಿ ಮತ್ತು ಆಸ್ಪತ್ರೆಗಳಿಂದ ದೂರ ಇದ್ದುಬಿಡಿ.

ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!