ಅಂಜನಾಪುರ-ಅಂಬ್ಲಿಗೊಳ ಜಲಾಶಯಕ್ಕೆ ಬಿವೈವಿ-ಬಿವೈಆರ್ ಬಾಗಿನ ಅರ್ಪಣೆ..!

ಅಂಜನಾಪುರ-ಅಂಬ್ಲಿಗೊಳ ಜಲಾಶಯಕ್ಕೆ ಬಿವೈವಿ-ಬಿವೈಆರ್ ಬಾಗಿನ ಅರ್ಪಣೆ..!

ಶಿಕಾರಿಪುರ ತಾಲೂಕಿನ ಜೀವನಾಡಿ ಅಂಜನಾಪುರ ಜಲಾಶಯ ಹಾಗೂ ಅಂಬ್ಲಿಗೊಳ ಜಲಾಶಯ ಭರ್ತಿಯಾಗಿದ್ದು ಸಂಸದ ಬಿವೈ ರಾಘವೇಂದ್ರ ಮತ್ತು ಶಾಸಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಹೋದರರು ಬುಧವಾರ ಬಾಗಿನ‌ ಅರ್ಪಿಸಿದ್ದಾರೆ.

ಶಿಕಾರಿಪುರ ತಾಲ್ಲೂಕಿನಾದ್ಯಂತ ಉತ್ತಮ ವರ್ಷಧಾರೆ ಹಿನ್ನಲೆಯಲ್ಲಿ ತಾಲ್ಲೂಕಿನ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು ಜಲಸಂಪನ್ಮೂಲ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ “ಬಾಗಿನ “
ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಮೈದುಂಬಿ ಹರಿಯುತ್ತಿರುವ ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗುರುಮೂರ್ತಿ, ಹುಲ್ಮಾರು ಮಹೇಶ್, ಹನುಮಂತಪ್ಪ,ರಾಘವೇಂದ್ರ ಮಾಜಿ,ಇತರರಿದ್ದರು.

Admin

Leave a Reply

Your email address will not be published. Required fields are marked *

error: Content is protected !!