ರೈತರಿಗೆ ಸಮಸ್ಯೆಯಾಗದಂತೆ ತಕ್ಷಣ ಸ್ಪಂದಿಸಿ: ಶಾಸಕ ಬಿವೈ ವಿಜಯೇಂದ್ರ

ರೈತರಿಗೆ ಸಮಸ್ಯೆಯಾಗದಂತೆ ತಕ್ಷಣ ಸ್ಪಂದಿಸಿ: ಶಾಸಕ ಬಿವೈ ವಿಜಯೇಂದ್ರ

ಶಿಕಾರಿಪುರ : ತೀವ್ರ ಬರಗಾಲದಿಂದ ವಿದ್ಯುತ್ ಪೂರೈಕೆ ಸಮಸ್ಯೆಯಾಗಿದ್ದು ರೈತರ ಸಮಸ್ಯೆಗಳನ್ನು ಆಲಿಸಿ ಮೊದಲಿಗೆ ಅವುಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು ಎಂದು ಶಾಸಕ ಬಿವೈ ವಿಜಯೇಂದ್ರ ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ  ರೈತರಿಗೆ ತೊಂದರೆಯಾಗದಂತೆ ಸುಟ್ಟ ಟಿ,ಸಿ.ಗೆ ಲೈನ್ ಮ್ಯಾನ್ ಗಳು ತಕ್ಷಣ ಸ್ಪಂದಿಸಿ ತಕ್ಷಣ ಎಸ್ಟಿಮೇಟ್ ಮಾಡಿ  ಕೊಡಬೇಕು ಅಕ್ರಮ ಸಕ್ರಮ ಯೋಜನೆ ಅಡಿ ಹಣ ಕಟ್ಟಿದ ರೈತರ ಮಾಹಿತಿ ಪಡೆದರು ತಕ್ಷಣವೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮಾತನಾಡುತ್ತೇನೆ ಎಂದರು.

ಶಾಸಕನಾಗಿ ಮೂರು ತಿಂಗಳು ಕಳೆದಿದೆ ನಿಮ್ಮ ಇಲಾಖೆಯ ಸಮಸ್ಯೆಗಳೇ ಹೆಚ್ಚು ಕೇಳುತ್ತಿದ್ದೇನೆ ಹಾಗಾಗಿ ಈಗ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾದರೆ ಬೇರೆ ರೀತಿಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಂದಿನ ತಿಂಗಳು ಮೊದಲ ವಾರದಲ್ಲಿ ಶಿರಾಳಕೊಪ್ಪದಲ್ಲಿ ಟಿಸಿ ರಿಪೇರಿ ಸೆಂಟರ್  ಉದ್ಘಾಟನೆ ಆಗುತ್ತಿದೆ ಇನ್ನೆಷ್ಟು ಸೌಲಭ್ಯ ಬೇಕು ಎಲ್ಲವೂ ಮಾಡಲಾಗಿದೆ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಬೇಕು ಬಹಳ ಎಚ್ಚರ ವಹಿಸಬೇಕು ಎಂದರು.

ಈ‌ ಸಭೆಯಲ್ಲಿ ಕೆ ಎಸ್ ಗುರುಮೂರ್ತಿ, ವಿರೇಂದ್ರ ಪಾಟೀಲ್, ಶಿವಬಸಪ್ಪ ಮತ್ತಿಕೊಟೆ, ನಾಗರಾಜ್ ಕೋರಲಹಳ್ಳಿ, ಪಾಲಕ್ಷಪ್ಪ ಭದ್ರಾಪುರ, ಸತೀಶ್ ತಾಳಗುಂದ, ಮಾಜಿ ರಾಘವೇಂದ್ರ, ಬೆಣ್ಣೆ ಪ್ರವೀಣ್, ಸುಧೀರ್ ಮಾರವಳ್ಳಿ, ಗಣೇಶ್  ನಾಗೀಹಳ್ಳಿ ಮೆಸ್ಕಾಂ ಅಧಿಕಾರಿಗಳು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!