ಪುರಸಭೆಗೆ ಶಾಸಕ‌ ಬಿವೈ ವಿಜಯೇಂದ್ರ‌ ಭೇಟಿ ಅಧಿಕಾರಿ ಫುಲ್ ಕ್ಲಾಸ್..!

ಪುರಸಭೆಗೆ ಶಾಸಕ‌ ಬಿವೈ ವಿಜಯೇಂದ್ರ‌ ಭೇಟಿ ಅಧಿಕಾರಿ ಫುಲ್ ಕ್ಲಾಸ್..!

ಶಿಕಾರಿಪುರ ತಾಲೂಕಿನ ಶಾಸಕರಾದ ಬಿವೈ ವಿಜಯೇಂದ್ರ ಸರ್ಕಾರಿ ಕಛೇರಿಗಳಲ್ಲಿನ ಲೋಪದೋಷಗಳನ್ನು ಸರಿ‌ಪಡಿಸಲು ಮುಂದಾಗಿದ್ದು ಪಟ್ಟಣದ ಪುರಸಭೆಗೆ ಗುರುವಾರ ಭೇಟಿ ನೀಡಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರಿಂದ ಪುರಸಭೆ ಮೇಲೆ ಸಾಕಷ್ಟು ಆರೋಪಗಳು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ
ಪದೇ ಪದೇ ಕಚೇರಿಗೆ ಜನರು ಅಲೆಯುವುದು ತಪ್ಪಬೇಕು ನಿಗದಿತ ಸಮಯದಲ್ಲಿ ಸಾರ್ವಜನಿಕರ ಕೆಲಸಕಾರ್ಯಗಳನ್ನು ಮಾಡಿಕೊಡಬೇಕು ನಿಮ್ಮ ನಡವಳಿಕೆಯಿಂದಾಗಿ ಜನಪ್ರತಿನಿಧಿಗಳ ಬಗ್ಗೆ ತಪ್ಪು ಅಭಿಪ್ರಾಯ ನಿರ್ಮಾಣವಾಗಿದೆ ನಮಗೆ ಮುಜುಗರ ಆಗುವಂತೆ ನಿಮ್ಮ ನಡವಳಿಕೆ, ಕೆಲಸಗಳು ಇರಬಾರದು, ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳಿ.

ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ನಿರ್ವಹಿಸದೇ, ಸ್ಥಳಕ್ಕೆ ತೆರಳಿ, ಪರಿಶೀಲಿಸಿ ಕೆಲಸಮಾಡಿ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಬರುವಂತಾಗಬೇಕು‌ E-ಸ್ವತ್ತಿನ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬರುವಂತಿವೆ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಿ ಕಂದಾಯ ಸಂಗ್ರಹಣೆಯ ಬಗ್ಗೆ ಇರುವ ಲೋಪದೋಷಗಳನ್ನು ಸರಿಪಡಿಸಿಲೊಳ್ಳುವಂತೆ ತಿಳಿಸಿದರು.

ಪುರಸಭೆಯಲ್ಲಿ ಸಾರ್ವಜನಿಕರ ದೂರು- ಕುಂದು ಕೊರತೆ ಬಾಕ್ಸ್ ಇಡಬೇಕು ಪುರಸಭೆಯ ಪಾರ್ಕ್ ಗಳ ಸರಿಯಾದ ನಿರ್ವಹಣೆ ಮಾಡುಬೇಕು ನಡವಳಿಕೆಗಳನ್ನು ತಿದ್ದಿಕೊಂಡು ಕಾರ್ಯನಿರ್ವಹಿಸದ ಸಿಬ್ಬಂದಿಯನ್ನು ಅಮಾನತು ಮಾಡಲಾಗುವು ಈ ಬಗ್ಗೆ ಮುಖಂಡರುಗಳಿಂದ ಶಿಫಾರಸು ಮಾಡಿಸಿದರೆ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

News by: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!