ಶಿಕಾರಿಪುರದಲ್ಲಿ ಸಿದ್ದರಾಮಯ್ಯ-ಯಡಿಯೂರಪ್ಪ ಫಿಕ್ಸಿಂಗ್: ಕಾಂಗ್ರೆಸ್’ಗೆ ಮಾಜಿ‌ ಎಂಎಲ್ಸಿ ಶಾಂತವೀರಪ್ಪ ಗೌಡ ರಾಜಿನಾಮೆ

ಶಿಕಾರಿಪುರದಲ್ಲಿ ಸಿದ್ದರಾಮಯ್ಯ-ಯಡಿಯೂರಪ್ಪ ಫಿಕ್ಸಿಂಗ್: ಕಾಂಗ್ರೆಸ್’ಗೆ ಮಾಜಿ‌ ಎಂಎಲ್ಸಿ ಶಾಂತವೀರಪ್ಪ ಗೌಡ ರಾಜಿನಾಮೆ

ಶಿಕಾರಿಪುರದ ಕಾಂಗ್ರೆಸ್‌ ಮುಖಂಡ ಹಾಗೂ ಕೆಪಿಸಿಸಿ ವಕ್ತಾರ ಶಾಂತವೀರಪ್ಪ ಗೌಡ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ಗೆ ರಾಜೀನಾಮೆ ಘೋಷಿಸಿದ್ದಾರೆ.

ಶಿಕಾರಿಪುರದಲ್ಲಿ ಸಿದ್ದರಾಮಯ್ಯ-ಯಡಿಯೂರಪ್ಪ ಮ್ಯಾಚ್ ಫಿಕ್ಸಿಂಗ್ ಅಂತ ಆರೋಪಿಸಿ, ತಮ್ಮ ಅಣ್ಣನ ಮಗ ನಾಗರಾಜ್ ಗೌಡಗೆ ಸಿದ್ದರಾಮಯ್ಯ ಟಿಕೆಟ್ ನಿರಾಕರಿಸಿ ವಿಜಯೇಂದ್ರ ಗೆಲುವಿಗೆ ಸಹಾಯ ಮಾಡಿದ್ದಾರೆಂದು ಗೌಡ್ರು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಒಬ್ಬ ಭ್ರಷ್ಟ ಮತ್ತು ಲಂಪಟನಾದ ಯಡಿಯೂರಪ್ಪ ನಿಂದಾಗಿ 2 ಬಾರಿ ನನಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಜೊತೆ ಯಡಿಯೂರಪ್ಪ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ.

ನಮ್ಮ ತಂದೆ ಯಡಿಯೂರಪ್ಪ ಜೊತೆ ಬೆಂಬಲವಾಗಿ ನಿಂತಿದ್ದರು. ಲಿಂಗಾಯತ ಹಾಗೂ ಕುರುಬ ಸಮಾಜದ ಮುಖಂಡರು ಅವರಿಗೆ ಬೆಂಬಲ ನೀಡಿದ್ದರು. ನಮ್ಮ ಪ್ರಾಣದ ಹಂಗು ತೊರೆದು ಅವರನ್ನು ಕಾಪಾಡಿದೆವು. ಹೀಗಿದ್ದೂ ನಮ್ಮ ಅಣ್ಣನ ಮಗ ನಾಗರಾಜ್ ಗೌಡನಿಗೆ ಕಾಂಗ್ರೆಸ್‌ ಟಿಕೆಟ್ ತಪ್ಪಿದೆ.

ಯಡಿಯೂರಪ್ಪ ಭ್ರಷ್ಟಾಚಾರದ ಗುರು. ಹಾಗಾಗಿ ಮಕ್ಕಳೂ ಅದೇ ರೀತಿ ಆಗಿದ್ದಾರೆ. ಯಡಿಯೂರಪ್ಪ ಹೊರತು ಪಡಿಸಿ ಬೇರೆ ಯಾರೂ ನನಗೆ ಬಿಜೆಪಿಯಲ್ಲಿ ತೊಂದರೆ ಕೊಟ್ಟಿಲ್ಲ. ಆಗ ಬಿಜೆಪಿ ಬಿಡಲು ಹಾಗೂ ಕಾಂಗ್ರೆಸ್‌ ನಲ್ಲಿ ತೊಂದರೆ ಆಗಲು ಯಡಿಯೂರಪ್ಪರೇ ಕಾರಣ.

ಶಿಕಾರಿಪುರದ ಜನತೆ ಜೀತದಾಳು ರೀತಿ ಮಾಡಿಕೊಂಡು ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಇಂದು ಶಿಕಾರಿಪುರದ ಜನತೆ ಪಕ್ಷ , ಭೇದ ಮರೆತು ನಾಗರಾಜ್ ಗೌಡರನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ನಾನು ಕೂಡ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡ್ತೇನೆ ಎಂದ ವಿಧಾನ ಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪ.

ನನಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಯಾವುದೇ ಅಸಮಾಧಾನ-ಅತೃಪ್ತಿ ಇಲ್ಲ. ಪಕ್ಷ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ.
2 ಬಾರಿ ಯಡಿಯೂರಪ್ಪ ಹಾಗೂ ಅವರ ಪುತ್ರನ ಎದುರು ಸ್ಫರ್ಧೇಗೆ ಅವಕಾಶ ನೀಡಿತ್ತು.
ಇಬ್ಬರ ವಿರುದ್ಧ ಹತ್ತಿರಕ್ಕೆ ಬಂದು ಸೋತಿದ್ದೇನೆ.
ನನ್ನ ಆತ್ಮ ಕಾಂಗ್ರೆಸ್ ನಲ್ಲೇ ಇದ್ದರೂ, ದೇಹ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪರ ಇದೆ ಯಡಿಯೂರಪ್ಪನ ವಂಶ ಅಳಿಯಬೇಕು. ಯಡಿಯೂರಪ್ಪನ ಮಗ ಒಬ್ಬ ಭ್ರಷ್ಟ. ಜೈಲಿನಲ್ಲಿರಬೇಕಾದವನು ಬೇಲ್ ಪಡೆದು ಓಡಾಡುತ್ತಿದ್ದಾನೆ.

ಇಡೀ ರಾಜ್ಯದ ಅಧಿಕಾರಿಗಳು, ರಾಜಕಾರಣಿಗಳು ನೋವು ತಿನ್ನುತ್ತಿದ್ದಾರೆ.ಅವರೆಲ್ಲರೂ ವಿಜಯೇಂದ್ರನ ಸೋಲಿಸಲು ಇಂದು ಬೆಂಬಲವಾಗಿ ನಿಂತಿದ್ದಾರೆ. ಎಲ್ಲರೂ ನನ್ನನ್ನು ಕೂಡ ಕರೆಯುತ್ತಿದ್ದಾರೆ. ಕಾಂಗ್ರೆಸ್ ನಲ್ಲಿದ್ದು, ಬಂಡಾಯ ಅಭ್ಯರ್ಥೀ ಪರವಾಗಿ ಹೋಗೋದು ಸರಿಯಲ್ಲ. ಹಾಗಾಗೀ ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದ ಮಾಜಿ ಎಂಎಲ್ಸಿ ಶಾಂತವೀರಪ್ಪ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!