ಶ್ರೀ ಗಿಡ್ದೆಶ್ವರ ಸಮುದಾಯ ಭವನದಲ್ಲಿ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ವರ್ಧಂತ್ಯೋತ್ಸವ ಕಾರ್ಯಕ್ರಮ..!

ಶ್ರೀ ಗಿಡ್ದೆಶ್ವರ ಸಮುದಾಯ ಭವನದಲ್ಲಿ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ವರ್ಧಂತ್ಯೋತ್ಸವ ಕಾರ್ಯಕ್ರಮ..!

ಶಿಕಾರಿಪುರ :ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ನಿರಂತರವಾಗಿ ಕಾರ್ಯವನ್ನು ಮಾಡುತ್ತಿದೆ.

ಅಂತರ್ಗತ ಧರ್ಮರಕ್ಷಣೆ, ಧರ್ಮಜಾಗೃತಿ,ಧರ್ಮಶಿಕ್ಷಣ,ರಾಷ್ಟ ರಕ್ಷಣೆಮತ್ತು
ಹಿಂದೂ ಸಂಘಟನೆ ಹೀಗೆ ಹಲವು ಉಪಕ್ರಮ ಕ್ರಮಗಳೊಂದಿಗೆ ಕಾರ್ಯ ಮಾಡುತ್ತಿದೆ

ಈ ವರ್ಷ 26 ಸೆಪ್ಟೆಂಬರ್ 2022 ರಂದು ಅಂದರೆ ಘಟಸ್ಥಾಪನೆಯ ದಿನ ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ 20 ವರ್ಷಗಳು ಪೂರ್ಣವಾಗುತ್ತಿದೆ.

ಈ ದ್ವಿದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ ಆಗಸ್ಟ್ -31 ರಿಂದ ಸಮಿತಿಯ ವತಿಯಿಂದ ದೇಶಾದ್ಯಂತ ‘ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ.

ಈ ಅಭಿಯಾನದ ಅಂತರ್ಗತ ಸಮಿತಿಯ ವತಿಯಿಂದ ದೇವಸ್ಥಾನಗಳಲ್ಲಿ ಹಿಂದೂ ರಾಷ್ಟ್ರದ ಪ್ರತಿಜ್ಞಾವಿಧಿ, ದೇವಸ್ಥಾನಗಳ ಸ್ವಚ್ಛತೆ,ರಾಷ್ಟ್ರ ಪುರುಷರ ಸ್ಮಾರಕಗಳ ಸ್ವಚ್ಛತೆ, ಹಿಂದೂ ರಾಷ್ಟ್ರದ ವ್ಯಾಖ್ಯಾನ, ಚರ್ಚಾ ಸಂವಾದ ಮತ್ತು ಹಿಂದೂ ಸಂಘಟನಾ ಮೇಳಗಳ ಆಯೋಜನೆ ಮಾಡಲಾಗಿದೆ.

ಈ ಅಭಿಯಾನದ ಅಂತರ್ಗತ ದಿನಾಂಕ – 9 – 11 – 2022 ರ ಬುಧವಾರ ಸಂಜೆ 5.30 ಕ್ಕೆ ಶಿಕಾರಿಪುರದ ದೊಡ್ಡಕೇರಿಯ ಶ್ರೀ ಗಿಡ್ದೆಶ್ವರ ಸಮುದಾಯ ಭವನದಲ್ಲಿ ವರ್ಧಂತ್ಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳು,ಮಹಿಳಾ ಸಂಘಟನೆ,ಧರ್ಮ ಪ್ರೇಮಿಗಳು ಮತ್ತು ಹಿಂದೂ ಬಾಂದವರು ಈ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ಈ ವರ್ಧಂತ್ತ್ಯೋತ್ಸವದಲ್ಲಿ ಭಾಗವಹಿಸುವ ಮೂಲಕ ತಮ್ಮ ಅಮೂಲ್ಯ ಸಮಯವನ್ನು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನೀಡಬೇಕು ಎಂದು ಹಿಂದೂ ಜನ‌ ಜಾಗೃತಿ ಸಮಿತಿಯ ವಿಜಯ ರೇವಣ್ಕರ್ ತಿಳಿಸಿದ್ದಾರೆ.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!