ಶಿಕಾರಿಪುರ :ಪಠ್ಯ ಪರಿಷರಣೆಯಲ್ಲಿ ನಾರಾಯಣ ಗುರುಗಳಿಗೆ ಅಪಮಾನ: ಎಸ್ಎನ್ ಜಿವಿ ಪ್ರತಿಭಟನೆ..!

ಶಿಕಾರಿಪುರ :ಪಠ್ಯ ಪರಿಷರಣೆಯಲ್ಲಿ ನಾರಾಯಣ ಗುರುಗಳಿಗೆ ಅಪಮಾನ: ಎಸ್ಎನ್ ಜಿವಿ ಪ್ರತಿಭಟನೆ..!

ಶಿಕಾರಿಪುರ ಪಟ್ಟಣದ ತಾಲೂಕ್ ಕಛೇರಿ ಎದುರು ನಾರಾಯಣ ಗುರು ವಿಚಾರ ವೇದಿಕೆಯ ವತಿಯಿಂದ ರಾಜ್ಯ ಸರ್ಕಾರ ಪಠ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಪಾಠವನ್ನು ಸಮಾಜ ವಿಜ್ಞಾನದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ನಾರಾಯಣ ಗುರು ವಿಚಾರ ವೇದಿಕೆಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಈ ವೇಳೆ ಮಾತನಾಡಿದ ಎಸ್‌ಎನ್ ಜಿವಿ ಜಿಲ್ಲಾಧ್ಯಕ್ಷ ಪ್ರವೀಣ್ ಶ್ರೀ ನಾರಾಯಣ ಗುರುಗಳ ಜೀವನದ ಮೌಲ್ಯಾಧಾರಿತ ವಿಷಯ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಬೇಕು ಅದರೆ ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಿಸಿ ಅಪಮಾನ ಮಾಡಿದೆ

ಕೂಡಲೇ ನಾರಾಯಣ ಗುರುಗಳ ಪಾಠಗಳನ್ನು ಎಂದಿನಂತೆ ಮುಂದುವರಿಸಿ ಎಂದು ಆಗ್ರಹಿಸಿದರು‌.

ರಾಜ್ಯದಲ್ಲಿ ಅತೀ ಹೆಚ್ಚು ಈಡಿಗ ಸಮಾಜದವರು ಇದ್ದು ನಮ್ಮ ಸಮುದಾಯದಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ಮೀಸಲಿಡಬೇಕು ಎಂದು ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು‌‌.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಣಿ ಮಾಲತೇಶ್,ಮಾಜಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ,ಪುರಸಭಾ ಸದಸ್ಯ ಎಸ್ .ಪಿ ನಾಗಾರಾಜಗೌಡ್ರು,ಎಸ್ ಎನ್ ಜಿವಿಯ ಜಿಲ್ಲಾಧ್ಯಕ್ಷ ಪ್ರವೀಣ್ , ತಾಲೂಕ್ ಅಧ್ಯಕ್ಷ ಕೇಶವಮೂರ್ತಿ ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!