ಶಿರಾಳಕೊಪ್ಪ ಪುರಸಭೆಯ ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮಿ ಆಯ್ಕೆ..!
![ಶಿರಾಳಕೊಪ್ಪ ಪುರಸಭೆಯ ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮಿ ಆಯ್ಕೆ..!](https://shikarinews.com/wp-content/uploads/2022/07/IMG-20220712-WA0019.jpg)
ಶಿರಾಳಕೊಪ್ಪ : ಶಿರಾಳಕೊಪ್ಪ ಪುರಸಭೆಗೆ ನೂತನ ಉಪಾಧ್ಯಕ್ಷರಾಗಿ ವಿಜಯ ಲಕ್ಷ್ಮಿ ಲೋಕೇಶ್ ಅವರು ಆಯ್ಕೆಯಾಗಿದ್ದು ಸಂಸದ ಬಿ. ವೈ ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮಾತನಡಿ ಅವರು ನೀರಾವರಿ, ಶಿಕ್ಷಣ ಹಾಗೂ ನಗರ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ದೇವರು ಮೆಚ್ಚುವ ರೀತಿಯಲ್ಲಿ ಸರ್ಕಾರದ ಆಸ್ತಿಯನ್ನು ಉಳಿಸುವ ಕಾರ್ಯ ಮಾಡಿದ್ದೇವೆ.
![](https://shikarinews.com/wp-content/uploads/2022/07/IMG-20220712-WA0020-1024x657.jpg)
ಶಿರಾಳಕೊಪ್ಪ ನಗರೋತ್ತಾನ ಅಭಿವೃದ್ಧಿಗಾಗಿ 30 ಕೋಟಿ ಅನುದಾನ ನೀಡಲಾಗಿದೆ, ಶಿವಶರಣೆ ಅಕ್ಕ ಮಹಾದೇವಿ ಅವರ ಹೆಸರನ್ನು ಮಹಿಳಾ ಪಾಲಿ ಟೇಕ್ನಿಕ್ ಕಾಲೇಜಿಗೆ ಹೆಸರು ಇಡುವ ಮೂಲಕ 10 ಕೋಟಿ ಅನುದಾನವನ್ನು ನೀಡಿದ್ದೇವೆ.
ನಗರದ ಮದ್ಯದಲ್ಲಿ ಇರುವ ಸ್ಟೇಡಿಯಂ ಅಭಿವೃದ್ಧಿ, ಸೊರಬ ರಸ್ತೆಗೆ 10 ಕೋಟಿ ಅನುದಾನದಲ್ಲಿ ರಸ್ತೆ ಹಾಗೂ ಅಲಂಕಾರಿಕ ಬೀದಿ ದೀಪದ ಕೆಲಸ, ಈ ರೀತಿಯಲ್ಲಿ ಶಿಕಾರಿಪುರ / ಶಿರಾಳಕೊಪ್ಪ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
![](https://shikarinews.com/wp-content/uploads/2022/07/IMG-20220712-WA0018-1024x482.jpg)
ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ, ಅರಣ್ಯ ನಿಗಮದ ಉಪಾಧ್ಯಕ್ಷರಾದ ರೇವಣಪ್ಪ , ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ, ಹನುಮಂತಪ್ಪ, ಪುರಸಭೆ ಅಧ್ಯಕ್ಷರಾದ ಮಂಜುಳಾ ರಾಜು ಹಾಗೂ ಸದಸ್ಯರು ಮತ್ತಿತರ ಮುಖಂಡರು ಇದ್ದರು.
News By: Raghu Shikari-7411515737