ಸೋಂಕಿಗೆ ಮನೆಮದ್ದು ಮತ್ತು ಆಯುರ್ವೇದ ಸೂಕ್ತ..!
![ಸೋಂಕಿಗೆ ಮನೆಮದ್ದು ಮತ್ತು ಆಯುರ್ವೇದ ಸೂಕ್ತ..!](https://shikarinews.com/wp-content/uploads/2022/01/images-2-3.jpeg)
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಇಂದಿನ ಲಕ್ಷಣಗಳನ್ನು ನಿಯಂತ್ರಿಸಿ ಸಾಕು, ಒಂದು ಅಥವಾ ಎರಡು ವಾರದಲ್ಲಿ ಸ್ವತಃ ಗುಣವಾಗುತ್ತದೆ. ಆತಂಕದಿಂದ ಸ್ಟಿರಾಯ್ಡ್ ಬಳಕೆಗೆ ಅಥವಾ ಈ ಅವಸ್ಥೆಯಲ್ಲಿ ವ್ಯಾಕ್ಸೀನ್ ಗೆ ಮೊರೆಹೋದರೆ ತಕ್ಷಣದ ಮತ್ತು ದೀರ್ಘಕಾಲೀನ ಅಪಾಯಗಳು ಹೆಚ್ಚು.
ಶೇ. 20 ರಷ್ಟು ಜನ ಆಸ್ಪತ್ರೆ ಸೇರುತ್ತಿರುವುದು ಸಣ್ಣ ಸಣ್ಣ ತಪ್ಪುಗಳಿಂದ ಬಹಳಷ್ಟು ಹಣ ಮತ್ತು ಕೆಲವೊಮ್ಮೆ ಆರೋಗ್ಯ ಮತ್ತೂ ಕೆಲವೊಮ್ಮೆ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಚ್ಚರ.
![](https://shikarinews.com/wp-content/uploads/2021/03/images-13.jpeg)
ಮನೆ ಮದ್ದು ಏನು:
• ಶುಂಠಿ ಮತ್ತು ಜೀರಿಗೆ ಬಳಸಿ ಕಷಾಯ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿ
• ಶುದ್ಧ ಅರಿಶಿಣವನ್ನು ನೇರ ಬೆಂಕಿಗೆ ಅಥವಾ ಚೆನ್ನಾಗಿ ಬಿಸಿ ಮಾಡಿದ ತೆಳ್ಳನೆಯ ಪಾತ್ರಗೆ ಸುರಿದರೆ ಗಾಢ ಹೊಗೆ ಬರುತ್ತದೆ. ಆ ಹೊಗೆಯನ್ನು ತಕ್ಷಣ ಮೂಗಿನಿಂದ ಎಳೆದುಕೊಳ್ಳಿ, ಮೂಗು ಸ್ವಲ್ಪ ಉರಿಯುತ್ತದೆ, ಆದರೆ ತಕ್ಷಣವೇ ಮೂಗು ಕಟ್ಟಿರುವುದು ಅಥವಾ ಸೋರುವುದು ನಿಲ್ಲುತ್ತದೆ.
• ಅನಾರೋಗ್ಯ ಎಂದು ನಿತ್ಯದ ಕೆಲಸ ನಿಲ್ಲಿಸದಿರಿ, ಶರೀರದಿಂದ ಸ್ವಲ್ಪ ಬೆವರು ಹೊರ ಹೋದರೂ ಸಾಕಷ್ಟು ರೋಗಕಾರಕ ಅಂಶಗಳು ಹೊರಹೋಗುತ್ತವೆ
• ಅಂಗೈ ಮತ್ತು ಅಂಗಾಲುಗಳನ್ನು ಆಗಾಗ ಚೆನ್ನಾಗಿ ಬಿಸಿ ಮಾಡಿಕೊಳ್ಳುತ್ತಿರಿ, ಇಲ್ಲಿ ಹರಡಿರುವ ಸೂಕ್ಷ್ಮ ನರ ತಂತುಗಳು ಉಸಿರಾಟದಲ್ಲಿನ ಕಫವನ್ನು ಕರಗಿಸುತ್ತವೆ, ತಮಸ್ಸು ಕರಗಿ ಸತ್ವ ಜಾಗ್ರತವಾಗುತ್ತದೆ
![](https://shikarinews.com/wp-content/uploads/2020/05/Bale-ele-oota1.jpg)
ಆಹಾರದ ವಿಷಯ:
ರೋಗಕ್ಕೆ ನಮ್ಮ ಆಹಾರದಿಂದ ಸಿಗಬಹುದಾದ ಬಲವನ್ನು ಕಿತ್ತೆಸೆದುಬಿಡಬೇಕು, ಆಗ ಮನೆಮದ್ದುಗಳು ಚೆನ್ನಾಗಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಅದ್ದರಿಂದ ಆಹಾರ ಪಾಲನೆ ಮುಖ್ಯ.
ಇಲ್ಲದೇ ಹೋದರೆ ಒಂದೆಡೆ ರೋಗ ಬೆಳೆಯುತ್ತದೆ ಮತ್ತೊಂದು ಕಡೆ ಶರೀರ ಕ್ಷೀಣಿಸುತ್ತದೆ. ಈ ಹಂತದಲ್ಲಿ ಆಸ್ಪತ್ರೆಗೆ ಸೇರಿದರೆ ರಾಸಾಯನಿಕ ಔಷಧಿಗಳ ತೀವ್ರತೆ ಕನಿಷ್ಟ ಆರು ತಿಂಗಳು ಕಳೆದರೂ ಮರಳಿ ಬಾರದಷ್ಟು ಶಕ್ತಿಯನ್ನು ಕುಂದಿಸುತ್ತವೆ. ಕೆಲವೊಮ್ಮೆ ಔಷಧಿಗಳೇ ಅಪಾಯ ತರುತ್ತವೆ…! ಹಾಗಾಗಿ ಕೆಳಗಿನ ಆಹಾರ ನಿಯಮಗಳನ್ನು ಪಾಲಿಸಿ…
![](https://shikarinews.com/wp-content/uploads/2020/06/images-83.jpeg)
• ಎಣ್ಣೆ ಪದಾರ್ಥ, ಕರಿದ ಪದಾರ್ಥಗಳು, ಮೇಲಿನಿಂದ ವಗ್ಗರಣೆ ಕಲಸಿದ ಅನ್ನಗಳು, ಬೇಕರಿ ಮತ್ತು ಜಂಕ್ ಆಹಾರಗಳು ಅತ್ಯಂತ ಅಪಾಯವನ್ನು ತಂದೊಡ್ಡುತ್ತವೆ…
• ಅಜೀರ್ಣವಾಗುವಂತೆ ಆಹಾರ ಸೇವಿಸಬೇಡಿ, ಇದು ಬಹಳಷ್ಟು ಜಾಗ್ರತೆಯಿಂದ ನಿರ್ವಹಿಸಬೇಕಾದ ಕ್ರಿಯೆ
• ಅಜೀರ್ಣ ಎನಿಸಿದರೆ, ಹಸಿವು ಇಲ್ಲ ಎನಿಸಿದರೆ ಆಹಾರ ಸೇವನೆ ಬೇಡವೇ ಬೇಡ. ಕೇವಲ ಒಂದು ಗ್ಲಾಸ್ ಗಂಜಿ ಸೇವಿಸಬಹುದು…
ಆಯುರ್ವೇದೀಯ ಔಷಧಗಳು:
ಬಾರದಂತೆ ತಡೆಯುವ ಅಥವಾ ಅಪಾಯ ತಡೆಯುವ ಔಷಧಗಳು:
• Viropyrine Plus(GVR Powder) powder
• Viropyrine capsules or Trishun tab
• Ayurdantham Liquid(ಗಂಟಲು ತೊಳೆಯಲು ಅತ್ಯಂತ ಶ್ರೇಷ್ಠ ಔಷಧ)
• Ayurlung powder (ಕಫ ಮತ್ತು ಕಫರಹಿತ ಕೆಮ್ಮು ತಡೆಯಲು ಮತ್ತು ಚಿಕಿತ್ಸಿಸಲು)
![](https://shikarinews.com/wp-content/uploads/2020/08/IMG_20200716_080621_875-2.jpg)
ಬಳಕೆಯ ವಿಧಾನ ಔಷಧಗಳಲ್ಲೇ ಇರುತ್ತದೆ…
8792290274
9148702645
ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴