ಶಿಕಾರಿಪುರ: ಹಿಂದೂಗಳು ಜಾಗೃತರಾಗದೇ ಇದ್ದರೆ ಬಾಂಗ್ಲಾದೇಶ ಪರಿಸ್ಥಿತಿ ಭಾರತದಲ್ಲೂ ನಿರ್ಮಾಣವಾಗುತ್ತದೆ: ಎಸ್.ಬಿ ಮಠದ್…!

ಶಿಕಾರಿಪುರ: ಹಿಂದೂಗಳು ಜಾಗೃತರಾಗದೇ ಇದ್ದರೆ ಬಾಂಗ್ಲಾದೇಶ ಪರಿಸ್ಥಿತಿ ಭಾರತದಲ್ಲೂ ನಿರ್ಮಾಣವಾಗುತ್ತದೆ: ಎಸ್.ಬಿ ಮಠದ್…!

ಶಿಕಾರಿಪುರ ಪಟ್ಟಣದಲ್ಲಿ ಯುವಾ ಬ್ರಿಗೇಡ್ ವತಿಯಿಂದ‌ ಬಾಂಗ್ಲಾದೇಶದಲ್ಲಿ ನಡೆದ‌ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪಂಜಿನ ಮೇರವಣಿಗೆ ನಡೆಸಿ ಬಳಿಕ ಆರ್ ಎಸ್ಎಸ್ ಹಿರಿಯರಾದ ಎಸ್.ಬಿ.ಮಠದ್ ಮಾತನಾಡಿದರು.

ನೆರೆಮನೆ ಬೆಂಕಿ‌ ನಮ್ಮ‌ ಮನೆಯನ್ನು ಸುಡದೇ ಬಿಡುವುದಿಲ್ಲ ಪಕ್ಕದ ಬಾಂಗ್ಲಾದೇಶದಲ್ಲಿ ನಡೆದ‌ ಘಟನೆ ಭಾರತಕ್ಕೆ ವ್ಯಾಪಿಸದೇ ಇರದು ನಾವಹ ಜಾಗೃತರಾಗದೇ ಇದ್ದರೆ ನಾವು ಬದುಕುವುದು ಕಷ್ಟವಾಗುತ್ತದೆ ಭಾರತೀಯರು ಶತಮಾನದ ದಾಸ್ಯದಿಂದ ಎಲ್ಲಾವನ್ನು ಮರೆತು ಹೊಗಿದ್ದೇವೆ ನಮಗೆ ನಮನ್ನೂ ರಕ್ಷಣೆ ಮಾಡಿಕೊಳ್ಳುವ ಶಕ್ತಿ ಇಲ್ಲ ಅಂದರೆ ಬದುಕಿ ಪ್ರಯೋಜನವಿಲ್ಲ ಎಂದರು.

ನಾವು ಭಾರತೀಯರು ಆಗಿ ಉಳಿಯಬೇಕು ಅಂದರೆ ಸಮರ್ಥವಾಗಿ ಎಲ್ಲಾವನ್ನು ಎದುರಿಸುವ ಶಕ್ತಿ ನಮಗೆ ಇರಬೇಕು ಅದಕ್ಕಾಗಿ ಹಿಂದೂ ಶಕ್ತಿ ಜಾಗೃತವಾಗಬೇಕಾಗಿದೆ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ‌ಮೇಲಿನ ದೌರ್ಜನ್ಯವನ್ನು ನಾವು ಖಂಡಿಸದೇ ಇದ್ದಾರೆ ನಾವು ನಮ್ಮ ತನವನ್ನು ಕಳೆದುಕೊಂಡತೆ‌

ಹಿಂದೂ ಶಕ್ತಿ ಜಾಗೃತವಾಗಬೇಕು ಇಲ್ಲದೇ ಇದ್ದಾರೆ ನಾವು ಕತ್ತಲಿನಲ್ಲಿ ಇರಬೇಕಾಗುತ್ತದೆ ಈ ಪಂಜಿನ ಬೆಳಕಿನ ‌ಮೂಲಕ ಇಡೀ ದೇಶಕ್ಕೆ ಬೆಳಕು ನೀಡುವಂತಗಾಬೇಕು ಸಮಾಜದಲ್ಲಿ ಒಬ್ಬ ಹಿಂದೂ ಎದ್ದರೇ ಸಮಾಜ ಎಚ್ಚರಗೊಳ್ಳಬೇಕು ಯಾವುದೇ ಸಮಯದಲ್ಲಿ ಕರೆ ಬಂದರು ಕೂಡಲೇ ಜಾಗೃತರಾಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ನಾರಾಯಣ ರಾವ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಪ್ರಕಾಶ್, ಭವರ್ ಸಿಂಗ್, ಹಿಂದೂ ಜನಜಾಗೃತಿ ಸಮಿತಿ ಪರುಶುರಾಮ್ ,ಪುರಸಭಾ ಸದಸ್ಯ ವಿಶ್ವನಾಥ, ಬಿಜೆಪಿ ಉಪಾಧ್ಯಕ್ಷ ಗಿರೀಶ್ ಧಾರವಾಡ,ಶ್ರೀನಿವಾಸ್,ಬಿಜೆಪಿ ಪ್ರಧಾನ ಕಾರ್ಯದರ್ಶಿ ಪವನ ಛೌತಿ, ಯುವಾ ಬ್ರಿಗೇಡ್ ಸಂಚಾಲಕ‌ ನವೀನ್,ಬಿಜೆಪಿ ಯುವಮೋರ್ಚಾ ಅಧ್ಯಕ್ಷ‌ ಪ್ರವೀಣ್ ಬೆಣ್ಣೆ, ಪವನ್ ಕಲಾಲ್, ವೀರಣ್ಣಗೌಡ, ರಾಮಸೇನೆ ರಾಜ್ ಭಜರಂಗಿ,ಸೇರಿದಂತೆ ಅನೇಕರು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!