ಶಿಕಾರಿಪುರ: ಕಾಳೆನಹಳ್ಳಿ ಶಿವಯೋಗ ಮಂದಿರಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಭೇಟಿ ನೀಡಿ ಶ್ರೀಗಳ‌ ಆರ್ಶಿವಾದ ಪಡೆದರು..!

ಶಿಕಾರಿಪುರ: ಕಾಳೆನಹಳ್ಳಿ ಶಿವಯೋಗ ಮಂದಿರಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಭೇಟಿ ನೀಡಿ ಶ್ರೀಗಳ‌ ಆರ್ಶಿವಾದ ಪಡೆದರು..!

ಶಿಕಾರಿಪುರ: ಸುಕ್ಷೇತ್ರ ಶ್ರೀ ಶಿವಯೋಗಾಶ್ರಮ ಕಪ್ಪನಹಳ್ಳಿ ಕಾಳೇನಹಳ್ಳಿಯ ಪೀಠಾಧಿಪಧಿಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಆಶೀರ್ವಾದವನ್ನು ಮಾಜಿ ಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಪಡೆದರು.

ಈ ವೇಳೆ ಶ್ರೀ ರುದ್ರಮುನಿ‌‌ ಮಹಾಸ್ವಾಮಿಗಳ ಮತ್ತು ರೇವಣ್ಣಸಿದ್ದ ಮಹಾಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.

ನಂತರ ಕಾಳೆನಹಳ್ಳಿ ಶಿವಯೋಗ ಮಂದಿರ ಶ್ರೀಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಜೊತೆ ಶ್ರೀಮಠದಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿ ಕಾಳೆನಹಳ್ಳಿ ಶಿವಯೋಗ ಮಂದಿರದಲ್ಲಿ ಮೂಲಭೂತ ಸೌಲಭ್ಯಗಳ ಕೊರೆತೆ ಇದೆ ಮತ್ತು ಆಧ್ಯಾತ್ಮಿಕ ಕ್ಷೇತ್ರವಾಗಿ ಮಠ ಅಭಿವೃದ್ಧಿಯಾಗಬೇಕು ಯೋಗ ಧ್ಯಾನ ಮಂದಿರ ಸೇರಿದ್ದಂತೆ ಬರುವ ಭಕ್ತರಿಗೆ ಹೊಸ ಚೈತನ್ಯವನ್ನು ನೀಡುವ ಒಂದು ಸಾತ್ವಿಕ ಆಧ್ಯಾತ್ಮಿಕ ಕೇಂದ್ರವಾಗಿ ಬೆಳಯಬೇಕಾಗಿದೆ ಎಂದರು.

ಈ ವೇಳೆ ಬಿ.ಎಸ್ ಯಡಿಯೂರಪ್ಪನವರು ಶ್ರೀಮಠದ ಅಭಿವೃದ್ಧಿಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೆಗೌಡ, ಭಾರತಿ ಶೆಟ್ಟಿ,ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ,ಮಾಜಿ ಎಂಐಡಿಬಿ ಅಧ್ಯಕ್ಷ ಪದ್ಮನಾಭ ಭಟ್,ಎಂಐಡಿಬಿ ಅಧ್ಯಕ್ಷ ಗುರುಮೂರ್ತಿ, ಗಾಯಿತ್ರಿ ಮಲ್ಲಪ್ಪ,ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ,ಕಪ್ಪನಹಳ್ಳಿ ಗ್ರಾ. ಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯ ಗ್ರಾಮಸ್ಥರು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!