ಶಿಕಾರಿಪುರ: ಪ್ರೀತಿಸಿದ ಪ್ರೀಯಕರನನ್ನು ಬಿಡಲು ಒಪ್ಪದ ಯುವತಿ ತಂದೆಯಿಂದಲ್ಲೇ ಮಗಳ ಕೊಲೆ..!
![ಶಿಕಾರಿಪುರ: ಪ್ರೀತಿಸಿದ ಪ್ರೀಯಕರನನ್ನು ಬಿಡಲು ಒಪ್ಪದ ಯುವತಿ ತಂದೆಯಿಂದಲ್ಲೇ ಮಗಳ ಕೊಲೆ..!](https://shikarinews.com/wp-content/uploads/2021/10/IMG_20211029_120729_096.jpg)
ಶಿಕಾರಿಪುರ ತಾಲೂಕಿನ ಕೆಂಚಿ ಗೊಂಡನ ಕೊಪ್ಪದ ಚಂದ್ರಪ್ಪ ಎನ್ನುವ ವ್ಯಕ್ತಿ ತನ್ನ ಮಗಳಾದ ರಾಧಾ(22) ಕೊಲೆ ಮಾಡಿರುವ ಘಟನೆ ಗುರುವಾರ ಬಿರೂರು ಬಳಿ ನಡೆದಿದೆ.
ಶಿಕಾರಿಪುರದ ಕೆಂಚಿಕೊಂಡನ ಕೊಪ್ಪದ ಯುವಕನೊರ್ವನನ್ನು ಯುವತಿ ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು ಇತ್ತೀಚೆಗೆ ಮನೆಗೆ ಈ ವಿಷಯ ತಿಳಿದ್ದು ಆ ಯುವಕನ್ನು ಪ್ರೀತಿಸಿದಂತೆ ತಂದೆ ಬುದ್ದಿ ಹೇಳಿದ್ದರು ಇದಕ್ಕೆ ಒಪ್ಪಿಕೊಳ್ಳದ ಹಿನ್ನಲೆಯಲ್ಲಿ ಮಗಳನ್ನೆ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಚಿಕ್ಕಮಂಗಳೂರು ಜಿಲ್ಲೆಯ ಬೀರೂರು ಫಸ್ಟ್ ರೈಲ್ವೆಗೇಟ್ ಬಳಿ ವೇಲಿನಿಂದ ಕತ್ತನ್ನು ಸುತ್ತಿ ಕೊಲೆ ಮಾಡಿದ್ದು ನಂತರ ಅಲ್ಲಿಯೇ ಇದ್ದ ಕೆಸರು ಗುಂಡಿಯಲ್ಲಿ ಹಾಕಿ ಬಂದಿರುತ್ತೇನೆ.
![](https://shikarinews.com/wp-content/uploads/2021/09/IMG_20210825_185201_020.jpg)
ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಚಂದ್ರಪ್ಪ ಬಂದು ನನ್ನ ಮಗಳನ್ನು ಈ ಮೇಲ್ಕಂಡ ಸ್ಥಳದಲ್ಲಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
ನಂತರ ಚಂದ್ರಪ್ಪ ಬಗ್ಗೆ ಬೀರೂರು ಪೊಲೀಸ್ ಠಾಣೆಗೆ ಸ್ಥಳೀಯ ಪೋಲೀಸಿನವರು ಮಾಹಿತಿ ನೀಡಿದ್ದು.
ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ವಶಕ್ಕೆ ಪಡೆದಿರುತ್ತಾರೆ.
News By: Raghu shikari-7411515737