ಶಿಕಾರಿಪುರ: ಸುರಗಿಹಳ್ಳಿ ಗ್ರಾಮದಲ್ಲಿ ಕಿಟನಾಶಕ ಸೇವಿಸಿ ರೈತ ಆತ್ಮಹತ್ಯೆ..!

ಶಿಕಾರಿಪುರ: ಸುರಗಿಹಳ್ಳಿ ಗ್ರಾಮದಲ್ಲಿ ಕಿಟನಾಶಕ ಸೇವಿಸಿ ರೈತ ಆತ್ಮಹತ್ಯೆ..!

ಶಿಕಾರಿಪುರ: ಸಾಲ ಬಾಧೆ ತಾಳಲಾರದೆ ರೈತನೋರ್ವ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರ ತಾಲೂಕು ಸುರಗೀಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಸುರಗಿಹಳ್ಳಿ ಗ್ರಾಮದ ಚಂದ್ರಪ್ಪ ಬಿನ್ ಆನಂದಪ್ಪ (49) ಮೃತ ರೈತ ಎನ್ನಲಾಗಿದ್ದು ಸಣ್ಣ ಹಿಡುವಳಿ ರೈತರಾಗಿದ್ದರು.

ಮೃತ ರೈತ ಚಂದ್ರಪ್ಪ ಶುಂಠಿ ಬೆಳೆ ಬೆಳೆಯಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 25,000/- ರೂ ಬೆಳೆ ಸಾಲ ಪತ್ನಿಯ ಹೆಸರಲ್ಲಿ ಐಡಿಎಪ್ ಸಿ ಬ್ಯಾಂಕಿನಲ್ಲಿ 1,40,000/- ರೂ ಆಕಳು ಸಾಲ ಪಡೆದಿದ್ದರು ಕೈಗಡ 5ಲಕ್ಷ‌ ಸಾಲವನ್ನು ಪಡೆದಿದ್ದರು.

ಶುಂಠಿ ಬೆಳೆಯನ್ನು ಬೆಳೆಯಲು ಈ ಹಣವನ್ನು ಬಳೆಸಿಕೊಂಡಿದ್ದು ಬೆಳೆಗೆ ಬೆಲೆ ಸಿಗದೇ ಸೊಸೈಟಿ, ಬ್ಯಾಂಕುಗಳಲ್ಲಿ ಇತರೆ ಕಡೆಗಳಲ್ಲಿ ಮಾಡಿದ ಸಾಲ ತೀರಿಸಲು ಆಗದೆ ಹಿನ್ನಲೆಯಲ್ಲಿ ಮನನೊಂದು ಮನೆಯಲ್ಲಿ ಶುಂಠಿಗೆ ಸಿಂಪಡಿಸಲು ತಂದಿಟ್ಟಿದ್ದ ಕೀಟನಾಶಕ ಕುಡಿದು ಸಾವನ್ನಾಪ್ಪಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!