ಶಿಕಾರಿಪುರ: ಪತ್ರಕರ್ತರಿಗೆ ಮಹಾತ್ಮಗಾಂಧಿ ಸಮಾಜ ಪರಿವರ್ತನ ಟ್ರಸ್ಟ್ ವತಿಯಿಂದ ಕೋವಿಡ್ ಔಷಧ ಆಹಾರ ಕಿಟ್ ವಿತರಣೆ..!

ಶಿಕಾರಿಪುರ: ಪತ್ರಕರ್ತರಿಗೆ ಮಹಾತ್ಮಗಾಂಧಿ ಸಮಾಜ ಪರಿವರ್ತನ ಟ್ರಸ್ಟ್ ವತಿಯಿಂದ ಕೋವಿಡ್ ಔಷಧ ಆಹಾರ ಕಿಟ್ ವಿತರಣೆ..!


ಶಿಕಾರಿಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ವತಿಯಿಂದ ಪತ್ರಕರ್ತರಿಗೆ ಕೋವಿಡ್ ಮುಂಜಾಗ್ರತಾ ಮೆಡಿಕಲ್ ಕಿಟ್ ಹಾಗೂ ಆಹಾರ ಸಾಮಾಗ್ರಿಗಳನ್ನು ವಿತರಣೆ ನಡೆಸಿದರು.


ಈ ವೇಳೆ ಮಾತನಾಡಿದ ಟ್ರಸ್ಟ್ ನ ನಿರ್ದೇಶಕ ಬಸವರಾಜ್ ಪತ್ರಕರ್ತರು ಸಮಾಜದ ಮುಂಚೂಣಿಯಲ್ಲಿ ಕರೋನದಂತ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರಿಗೆ ಆರೋಗ್ಯ ದೃಷ್ಟಿಯಿಂದ ಸಾಕಷ್ಟು ಸೇವೆಯಲ್ಲಿ ತೊಡಗಿರುತ್ತಾರೆ ಅವರ ಕಾರ್ಯ ಶ್ಲಾಘನೀಯವಾಗಿದೆ.


ಸರ್ಕಾರ ಪತ್ರಕರ್ತರಿಗೆ ಸಾಕಷ್ಟು ಸೌಲಭ್ಯವನ್ನು ನೀಡಬೇಕು ಪತ್ರಕರ್ತರು ನಿಜವಾಗಿಯೂ ಸಂಕಷ್ಟದಲ್ಲಿ ಇದ್ದಾರೆ ಎಂದರು. 

ನಮ್ಮ‌ ಸಂಸ್ಥೆಯ ವತಿಯಿಂದ ಜಿಲ್ಲೆಯ 10,000 ಅಂಗವಿಕಲರಿಗೆ , ವಿಧವೆಯಾರಿಗೆ, ಅಸಂಘಟಿತ ಸಂಘ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಕರಿಗೆ ಆಹಾರ್ ಕಿಟ್ ಮೆಡಿಕಲ್ ಕಿಟ್ ವಿತರಣೆ ನಡೆಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ‌ ರಾಘವೇಂದ್ರ,ಮಹಾತ್ಮಗಾಂಧಿ ಟ್ರಸ್ಟ್ ನ ಸದಸ್ಯರಾದ ವಿನುತ್ ,ರೇಣುಕಮ್ಮ, ವಿಜಯ ಪಾಟೀಲ್, ದ್ವಾರಕೀಶ್ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!