ರೋಗೋತ್ಪತ್ತಿಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ ಇಂದಿನ ವಿಷಯ: ವಮನ ಪ್ರಧಾನ ಕರ್ಮ..!

ರೋಗೋತ್ಪತ್ತಿಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ ಇಂದಿನ ವಿಷಯ: ವಮನ ಪ್ರಧಾನ ಕರ್ಮ..!

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ

     ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌷🍀🌷

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಪಂಚಕರ್ಮ ಚಿಕಿತ್ಸೆ
(ಸರಣಿ ಲೇಖನಗಳು)

ರೋಗೋತ್ಪತ್ತಿಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ

▪️ಇಂದಿನ ವಿಷಯ: ವಮನ ಪ್ರಧಾನ ಕರ್ಮ

ಈ ಶರೀರಕ್ಕೆ ಎಳ್ಳಷ್ಟೂ ಧಕ್ಕೆಮಾಡದೇ ರೋಗಕಾರಕ ರಾಸಾಯನಿಕಗಳನ್ನು ಜೀವಕೋಶಗಳಿಂದ ಬಿಡುಗಡೆಗೊಳಿಸಿದ ಪೂರ್ವ ಕರ್ಮಗಳ ನಂತರ.

ಅವುಗಳನ್ನು ಅತ್ಯಂತ ಸಮರ್ಥವಾಗಿ ಶರೀರದ ಬಲ ಹಾಳಾಗದಂತೆ ಸೂಕ್ತ ಮಾರ್ಗದಿಂದ ಹೊರಕ್ಕೆ ಹಾಕುವ ಅತ್ಯಂತ ಪ್ರಧಾನ ಘಟ್ಟವೇ ಪ್ರಧಾನ ಕರ್ಮ.‌

ಇಲ್ಲಿ ಪೃಥ್ವಿ-ಅಪ್ ಗಳಿಂದಾದ(ಕಫ ದೋಷದಿಂದ ಆದ) ರಾಸಾಯನಿಕಗಳು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಶರೀರದ ಊರ್ಧ್ವ(ಮೇಲ್ಭಾಗ) ಭಾಗದಲ್ಲಿ ಸೇರಿಕೊಂಡಿರುತ್ತವೆ. ಇವುಗಳನ್ನು ಹೊರತೆಗೆಯಲು ಅತ್ಯಂತ ಸಮರ್ಥ ಮಾರ್ಗ ಎಂದರೆ “ಬಾಯಿ”. ಈ ಎಲ್ಲಾ ದೋಷಗಳನ್ನೂ ಹೊರತೆಗೆಯಲು
ಸುಮಾರು 245 ವಿಧದ ಔಷಧಿ ಕಲ್ಪಗಳನ್ನು(formulation) ಹೇಳುತ್ತಾರೆ.‌ ಅವುಗಳಲ್ಲಿ ಸೂಕ್ತವಾದ ಕಲ್ಪಗಳನ್ನು ಬಳಸಿ ವೈದ್ಯನು ವಾಂತಿ ಮಾಡಿಸುವ ಮೂಲಕ ರೋಗದ ಸಮೂಲವನ್ನೇ ಹೊರಹಾಕುತ್ತಾನೆ. ಅವುಗಳ ಸ್ಥಾನದಲ್ಲಿ ಆರೋಗ್ಯಯುತ ಅಂಶಗಳು ಸ್ಥಾಪಿತವಾಗುವಂತೆ ಮಾಡಿ, ತನ್ಮೂಲಕ ಚಿರಕಾಲದಲ್ಲೂ ರೋಗಗಳು ಬರದಂತೆ ತಡೆಯುತ್ತಾನೆ. ಇಂತಹ ಸುಭಾಗ್ಯ ಚಿಕಿತ್ಸಾ ವಿಧಾನಗಳು ಆಯುರ್ವೇದದಲ್ಲಿ ಇವೆ.

🔖 ವಮನ ಚಿಕಿತ್ಸೆಯ ಲಾಭ:
1) ಶರೀರವು ಜಡತ್ವದಿಂದ ಬಿಡುಗಡೆಯಾಗುತ್ತದೆ.
2) ಮಾನವ ಸಶಕ್ತ ಶರೀರ ಹೊಂದುತ್ತಾನೆ
3) ಅತ್ಯುತ್ತಮ ಜೀರ್ಣಶಕ್ತಿ ನಮ್ಮದಾಗುತ್ತದೆ
4) ಕಫದ(ಪೃಥ್ವಿ-ಆಪ್) ಆಶ್ರಯದಲ್ಲಿರುವ ತಮಸ್ಸು ಕರಗಿ ಹೊರ ಬರುವ ಕಾರಣ, ಮನಸ್ಸು ಆಲಸ್ಯ ಹೊಂದದೇ ಸದಾ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತದೆ.
5) ಬುದ್ಧಿ ಚುರುಕಾಗುತ್ತದೆ.
6) ಸ್ಮರಣಾ ಸಾಮರ್ಥ್ಯ ಹೆಚ್ಚುತ್ತದೆ.
7) ದೋಷಗಳಿಗೆ ಪೂರಕ ಆಹಾರವೇ ಇಲ್ಲದಂತೆ ಆಗಿ ಅವುಗಳ ಫೋಷಣೆ ನಿಲ್ಲುವುದರಿಂದ, ರೋಗ ಸಮೂಲ ಕರಗಿಹೋಗುತ್ತದೆ.
8) ಮುಂಬರುವ ಅನೇಕ ರೋಗಗಳನ್ನು ಇಂದೇ ತಡೆಯಲು ಇದು ಅತ್ಯಂತ ಮುಖ್ಯ.

👉 ನಾಳೆಯ ವಿಷಯ ಅತ್ಯಂತ ಪ್ರಮುಖ ಮತ್ತು ನಿರ್ಲಕ್ಷ್ಯ ವಹಿಸದೇ ಪಾಲಿಸಲೇ ಬೇಕಾದ ವಿಷಯವಾಗಿದೆ.
ಅದೇ,
ಸಂಸರ್ಜನ ಕ್ರಮ

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!