ಆಸ್ಪತ್ರೆ ರಹಿತ ಜೀವನ- ಮಧುಮೇಹ ಎಷ್ಟು ಸತ್ಯ?!

ಆಸ್ಪತ್ರೆ ರಹಿತ ಜೀವನ- ಮಧುಮೇಹ ಎಷ್ಟು ಸತ್ಯ?!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
🤔ಮಧುಮೇಹ ಎಷ್ಟು ಸತ್ಯ?!
•••••••••••••••••••••••••••••••••••••
ಏಕೆಂದರೆ,‌
ಇಂದಿನ 100 ಜನ ಮಧುಮೇಹಿಗಳಲ್ಲಿ 80 ಜನರಿಗೆ ಇರುವುದು ಮಧುಮೇಹ ಅಲ್ಲ. ಅದು ಕೇವಲ ರಕ್ತದ ಸಕ್ಕರೆ ಹೆಚ್ಚಿರುವ ಅವಸ್ಥೆ, ಮತ್ತು ಈ 80 ಜನರಲ್ಲಿ 50 ಜನರನ್ನು ಸುಲಭವಾಗಿ ಮತ್ತು ಉಳಿದ 30 ಜನರನ್ನು ಸ್ವಲ್ಪ ಕಷ್ಟದಿಂದ ಚಿಕಿತ್ಸಿಸಿ ಗುಣಪಡಿಸಬಹುದು! ಕೇವಲ 20 ಜನರು ಮಾತ್ರ ನಿಜವಾದ ಮಧುಮೇಹಿಗಳು ಇವರಿಗೆ ನಿರಂತರ ಚಿಕಿತ್ಸೆ ಬೇಕು ಮತ್ತು ಆಯುರ್ವೇದದ ಸಿದ್ಧಾಂತ ಅನುಸರಿಸಿ ಚಿಕಿತ್ಸಿಸಿದರೆ, ಈ 20 ಜನರ ಹೃದಯ, ಮೆದುಳು, ನರಗಳು, ಕಿಡ್ನಿಗಳನ್ನು ಸಂರಕ್ಷಿಸಬಹುದು!! ಶರೀರದಲ್ಲಿ ಮಾಯದ ಗಾಯಗಳಾಗದಂತೆ ಶಾಶ್ವತವಾಗಿ ತಡೆಯಬಹುದು.!!!

📖 ಸಾಧ್ಯಾಃ ಕಫೋತ್ತಾ ದಶ, ಪಿತ್ತಜಾಃ ಷಟ್ ಯಾಪ್ಯ, ನಸಾಧ್ಯಃ ಪವನಃ ಚತುಷ್ಕಃ |
ಸಮಕ್ರಿಯತ್ವಾತ್, ವಿಷಮ ಕ್ರಿಯತ್ವಾತ್, ಮಹಾ ಆತ್ಯಯಾತ್ ಚ ಯಥಾ ಕ್ರಮಂತೇ||7||
-ಚರಕ ಸಂಹಿತೆ ಚಿಕಿತ್ಸಾ ಸ್ಥಾನ-6(ಪ್ರಮೇಹ ಚಿಕಿತ್ಸಾ)

📑 ಒಟ್ಟು 20 ರೀತಿಯ ಪ್ರಮೇಹಗಳಲ್ಲಿ,
ಕಫಜ 10 ಪ್ರಮೇಹಗಳು ಚಿಕಿತ್ಸಾ ಸಾಧ್ಯ(ಅಂದರೆ ರಕ್ತದ ಸಕ್ಕರೆ ಹೆಚ್ಚಿರುವ ಶೇ 50% ಜನರು,) ಅಂದರೆ ಗುಣಪಡಿಸಲು ಸಾಧ್ಯ 👍

ಪಿತ್ತಜ 6 ಪ್ರಮೇಹಗಳು ಚಿಕಿತ್ಸಾ ಯಾಪ್ಯ(ಅಂದರೆ ರಕ್ತದ ಸಕ್ಕರೆ ಹೆಚ್ಚಿರುವ ಶೇ 30% ಜನರು) ಅಂದರೆ ನಿರಂತರ ಆಹಾರ ಪಾಲನೆ ಅವಶ್ಯಕ, ಆದರೆ ಮೇದಸ್ಸು ಕೆಡದಿದ್ದರೆ ಈ 30% ಸಹ ಗುಣಪಡಿಸುವುದು ಸಾಧ್ಯ 🤏

ವಾತಜ 4 ಪ್ರಮೇಹಗಳು(ಇವನ್ನೇ ಮಧುಮೇಹ ಎನ್ನುವುದು), ಈ 20% ಚಿಕಿತ್ಸಾ ಅಸಾಧ್ಯ, ಆದ್ದರಿಂದ ಔಷಧಿಗಳಿಂದಲೇ ಜೀವನ ಯಾಪನಗೈಯಬೇಕು 👎

ಏಕೆ ಹೀಗೆ ಎಂದರೆ,
ಸಮಕ್ರಿಯತ್ವಾತ್….. ಎಂದು ಆಯುರ್ವೇದ ವೈದ್ಯರಿಗೆ ಅರ್ಥವಾಗುವ ತಾಂತ್ರಿಕ ಭಾಷೆಯಲ್ಲಿ ಹೇಳಿದ್ದಾರೆ.

ನಮ್ಮ ಒಟ್ಟಾರೆ ಅಭಿಪ್ರಾಯ ಎಂದರೆ ಡಯಾಬಿಟೀಸ್ ಎಂದು ಹಣೆಪಟ್ಟಿ ಹಚ್ಚಿದ 80% ಜನರಿಗೆ ಅದು ಬರುವ ಹಂತದಲ್ಲಿದೆ, ಇನ್ನೂ ಬಂದಿಲ್ಲ, ಚಿಕಿತ್ಸೆ ಮಾಡಿದರೆ ಸಂಪೂರ್ಣ ಗುಣಪಡಿಸಬಹುದು💯

ಅಥವಾ, ನಿಜವಾಗಿಯೂ ಡಯಾಬಿಟೀಸ್ ಎಂದು ಕರೆಯಬಹುದಾದ ಆ ಅವಸ್ಥೆಯಲ್ಲಿ, ಮಧುಮೇಹ ಬಂದ ಒಂದೇ ಕಾರಣದಿಂದ ಹೃದಯ, ಕಿಡ್ನಿ , ಕಣ್ಣು , ನರ ಮುಂತಾದ ಯಾವುದೇ ಅವಯವಗಳನ್ನು ಹಾಳುಮಾಡಿಕೊಳ್ಳದೇ, ಭಗವಂತ ಕೊಟ್ಟ ಆಯುಷ್ಯದಷ್ಟು ಕಾಲ ನರಳದಂತೆ ಸುಖವಾಗಿ ನಮ್ಮ ನಮ್ಮ ಕೆಲಸಗಳನ್ನು ಮಾಡಿಕೊಂಡು, ದೇಹದಲ್ಲಿ ಕಾಯಿಲೆ ಇರುವುದೇ ಗೊತ್ತಾಗದಂತೆ ಬದುಕು ಸಾಗಿಸಬಹುದು😇

👉 ನಿಜವಾಗಿಯೂ ಡಯಾಬಿಟೀಸ್ ಎಂಬುದು
ಸಿಹಿ ಮೂತ್ರದ ರೋಗವೇ ಹೊರತು, ಸಿಹಿ ರಕ್ತದ ರೋಗವಲ್ಲ

👀 ನೆನಪಿಡಿ, ಏನೂ ಆಗದೇ ಸುಮ್ಮನಿದ್ದವನಿಗೆ ಹೆಲ್ತ್ ಚೆಕಪ್ ನೆಪದಲ್ಲಿ ರಕ್ತ ಪರೀಕ್ಷೆ ಮಾಡಿ ಅಥವಾ ಯಾವುದೋ ಕಾರಣಕ್ಕೆ ಆರೋಗ್ಯ ಸ್ವಲ್ಪವೇ ವ್ಯತ್ಯಯ ಇದ್ದ ಕಾಲದಲ್ಲಿ ಪರೀಕ್ಷೆ ಮಾಡಿ ಡಯಾಬಿಟೀಸ್ ಹಣೆಪಟ್ಟಿ ಕಟ್ಟುವುದು ಅನ್ಯಾಯ.

ಮತ್ತೂ ಘೋರತೆ ಏನೆಂದರೆ,
ಏನೂ ಅಲ್ಲದ ಮತ್ತು ಸುಲಭವಾಗಿ ಹೋಗಲಾಡಿಸಬಹುದಾದ ಮತ್ತು ಅನ್ಯ ಅವಯವಗಳನ್ನು ರಕ್ಷಿಸಬಹುದಾದ ಒಂದು ಕಾಯಿಲೆಗೆ, ಕಾಲಾಂತರದಲ್ಲಿ ಯಕೃತ್ತಿನ ಶಕ್ತಿಯನ್ನೇ ಕುಂದಿಸುವ ತೀಕ್ಷ್ಣ ರಾಸಾಯನಿಕಗಳಿಂದಾದ ಮಾತ್ರೆಗಳನ್ನು ಮತ್ತು ಶರೀರವನ್ನು ಒಣಗಿಸಿ ಬಿಡುವ ಇನ್ಸುಲಿನ್ ಅನ್ನು ನಿತ್ಯವೂ ಸೇವಿಸುವಂತೆ ಮಾಡಿರುವುದು ಮತ್ತು ಅದೇ ಕಾರಣದಿಂದ ರಕ್ತನಾಳ, ನರವ್ಯೂಹವನ್ನು ಕ್ಷೀಣಿಸಿ ಮನುಷ್ಯನನ್ನು ನರಕ ಸದೃಶ ಬಾಳುವಂತೆ ಮಾಡಿರುವುದು ಇಂದಿನ ವೈದ್ಯಕೀಯ ಕ್ಷೇತ್ರದ ಅತ್ಯಂತ ಬಾಲಿಷ ನಡೆ🤕

ಆದಗ್ಯೂ ಇದೇ ವಿಜ್ಞಾನ, ಇದನ್ನು ನಂಬದೇ ವಿಧಿ ಇಲ್ಲ, ಆಯುರ್ವೇದ ಬಳಸಿದಿರೋ ಮುಗಿಯಿತು ಕಥೆ ಎಂಬ ಭಯ ಹುಟ್ಟಿಸುತ್ತಿರುವುದು ಅಮಾನವೀಯ ಮತ್ತು ಹೇಯ ಕೃತ್ಯ🤦‍♀

ಮತ್ತು, ಎಲ್ಲದಕ್ಕಿಂತ ದೊಡ್ಡದು ಎಂದರೆ ಅದನ್ನೇ ನಂಬಿಕೊಂಡು ನರಕವಾದರೂ ಸರಿ ರಕ್ತ ಪರೀಕ್ಷೆಯಲ್ಲಿ ಸಕ್ಕರೆ ಅಂಶ ಸರಿ ಇದ್ದರೆ ಸಾಕು ಹೇಗೋ ಕಾಲನೂಕಿದರಾಯ್ತು ಎಂದು ಒಪ್ಪಿ ಬಾಳುತ್ತಿರುವುದು ಈ ಸಮಾಜದ ದೌರ್ಭಾಗ್ಯ🤢

ಮುಂದುವರಿಯುತ್ತದೆ….

ನಿಮ್ಮ ಸಂಪರ್ಕಕ್ಕೆ:
📞
8792290274
9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼☘ಸ್ವಾಸ್ಥ್ಯ ಸರ್ವರದ್ದೂ ಆಗಲಿ☘

Admin

Leave a Reply

Your email address will not be published. Required fields are marked *

error: Content is protected !!