ಶಿರಾಳಕೊಪ್ಪ: ಕ್ಯಾಂಟರ್ ಗುದ್ದಿ ಚಿರತೆ ಸಾವು..!

ಶಿರಾಳಕೊಪ್ಪ: ಕ್ಯಾಂಟರ್ ಗುದ್ದಿ ಚಿರತೆ ಸಾವು..!

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಸಮೀಪದ ಹುಲ್ಲಿನಕೊಪ್ಪ ಶ್ರೀಗಂಧದ ನೆಡುತೋಪು ಹತ್ತಿರದ ಬಸವನಂದಿಹಳ್ಳಿಯ ಸ್ಟೇಟ್ ಫಾರೆಸ್ಟ್ ಸರ್ವೆ ನಂ 73ರ ಬಳಿ ಸಂಜೆಯ ವೇಳೆಗೆ ಶಿರಾಳಕೊಪ್ಪದ ಕಡೆಯಿಂದ ಬರುತಿದ್ದ ಕ್ಯಾಂಟರ್ ರಸ್ತೆ ದಾಟುತಿದ್ದ ಸುಮಾರು 5 ವರ್ಷದ ಹೆಣ್ಣು ಚಿರತೆಗೆ ಡಿಕ್ಕಿಹೊಡೆದು ಪರಾರಿಯಾಗಿದೆ.

ಅಪಘಾತವಾದ ಸ್ಥಳದ ಸನಿಹದಲಿದ್ದ ಅರಣ್ಯ ಕಾವಲುಗಾರ ಅರುಣ್ ಮತ್ತು ಗಂಗಾಧರ್  ಇವರು ಗಮನಿಸಿ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.  ಚಿರತೆಯ ಸೊಂಟ ಮತ್ತು ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ನೋವಿನಿಂದ  ಚಿರತೆ ತೆವಳುತ್ತಲೇ ರಸ್ತೆ ದಾಟಿ ಶ್ರೀಗಂಧದ ಚೈನ್ ಲಿಂಕ್ ಬೇಲಿ ನುಸುಳಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿರುವುದು ಹೃದಯ ಕಲಕುವಂತಿತ್ತು. ಬಳಿಕ ಗಂಟೆಗಳ ಕಾಲ ನರಳಾಡಿ ಪ್ರಾಣ ಬಿಟ್ಟಿತು.

ತಕ್ಷಣಕ್ಕೆ ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ಬಿ. ಸುರೇಶ್  ಮಾತನಾಡಿ ಚಿರತೆಯ ಪ್ರಾಣ ಉಳಿಸಲು ಸರ್ವ ಪ್ರಯತ್ನ ಮಾಡಿದರೂ ಚಿರತೆ ಹೆಚ್ಚು ಹೊತ್ತು ಬದುಕಿ ಉಳಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್ ರವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಗುವುದು, ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ವಿವರ ತಿಳಿಯುವುದು ಎಂದು ಹೇಳಿದರು. 

ಉಪ ವಲಯ ಅರಣ್ಯಧಿಕಾರಿ ಶಿವಕುಮಾರ್, ಗೋವಿಂದ ರಾಜು,  ಫಾರೆಸ್ಟ್ ಗಾರ್ಡ ಮಹೇಶ್, ಪ್ರದೀಪ್ ಇದ್ದರು.

Admin

Leave a Reply

Your email address will not be published. Required fields are marked *

error: Content is protected !!