380ಕ್ಕೂ ಹೆಚ್ಚು ಬಿಹಾರ ರಾಜ್ಯದ ಜನರಿಗೆ ಅವರ ರಾಜ್ಯಕ್ಕೆ ಕಳುಹಿಸಿದ ತಾಲೂಕ್ ಆಡಳಿತ..!

380ಕ್ಕೂ ಹೆಚ್ಚು ಬಿಹಾರ ರಾಜ್ಯದ ಜನರಿಗೆ ಅವರ ರಾಜ್ಯಕ್ಕೆ ಕಳುಹಿಸಿದ ತಾಲೂಕ್ ಆಡಳಿತ..!

ಶಿಕಾರಿಪುರ: ಸಾಗರ, ಸೊರಬ, ಶಿಕಾರಿಪುರ ತಾಲೂಕಿನ ವಿವಿದೆಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಮದರಸಾದಲ್ಲಿ ಶಿಕ್ಷಣಕ್ಕಾಗಿ ಇದ್ದವರು ಸೇರಿ 380ಕ್ಕೂ ಹೆಚ್ಚು ಬಿಹಾರ ರಾಜ್ಯದ ಜನರಿಗೆ ಭಾನುವಾರ ಸಂಜೆ ಸರಕಾರಿ ಬಸ್‌ಗಳ ಮೂಲಕ ಹುಬ್ಬಳ್ಳಿಗೆ ಕಳುಹಿಸಲಾಯಿತು ಹುಬ್ಬಳಿ ಮೂಲಕ ರೈಲಿನ ಮೂಲಕ‌ ತಮ್ಮ ರಾಜ್ಯಕ್ಕೆ ಹೊಗಲಿದ್ದಾರೆ.

ಶಿರಾಳಕೊಪ್ಪ, ಶಿಕಾರಿಪುರದ ಮದರಸಾದಲ್ಲಿ ನೆಲೆಸಿದ್ದ 81, ತಾಲೂಕಿನ 17 ಶುಂಠಿ ಸ್ವಚ್ಚತಾ ಕೇಂದ್ರದಲ್ಲಿ ಕಾರ್ಮಿಕರಾಗಿದ್ದ 184, ಸಾಗರದಲ್ಲಿನ 136, ಸೊರಬ ತಾಲೂಕಿನ 52ಕಾರ್ಮಿಕರು ಸೇರಿ 380ಕ್ಕೂ ಹೆಚ್ಚು ಜನರು 17ಬಸ್‌ಗಳ ಮೂಲಕ ಹುಬ್ಬಳ್ಳಿಗೆ ತೆರಳಿದರು.

ವಲಸಿಗರೆಲ್ಲರೂ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿದ್ದು ಹುಬ್ಬಳ್ಳಿ ಮೂಲಕ ರೈಲಿನಲ್ಲಿ ಬಿಹಾರಕ್ಕೆ ತೆರಳಿದ್ದಾರೆ ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.

ಅಧಿಕಾರಿಗಳಾದ ಶೋಭಾ, ಉಪತಹಸೀಲ್ದಾರ್ ಮಂಜುನಾಥ್, ವೃತ್ತ ನಿರೀಕ್ಷಕ ಬಸವರಾಜ್, ಪಟ್ಟಣ ಠಾಣೆ ಪಿಎಸ್‌ಐ ರಾಜುರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!