ಶಿವಮೊಗ್ಗ :ಕರೋನ ಸೋಂಕಿನಿಂದ ಗುಣಮುಖರಾದ ನಾಲ್ಕು ಜನ ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ..!
![ಶಿವಮೊಗ್ಗ :ಕರೋನ ಸೋಂಕಿನಿಂದ ಗುಣಮುಖರಾದ ನಾಲ್ಕು ಜನ ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ..!](https://shikarinews.com/wp-content/uploads/2020/05/WhatsApp-Image-2020-05-25-at-12.04.59-PM.jpeg)
ಶಿವಮೊಗ್ಗ: ಕರೋನಾ ಸೋಂಕಿಗೆ ತುತ್ತಾಗಿ ಶಿವಮೊಗ್ಗ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಮಂದಿ ಗುಣಮುಖರಾಗಿದ್ದು ಇಂದು ನಾಲ್ಕು ಜನರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು.
ಅಹಮದಾಬಾದ್ ನಿಂದ ಮೇ 10ರಂದು ಶಿವಮೊಗ್ಗ ಬಂದಿದ್ದ 9 ಜನರಲ್ಲಿ 8 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಈ ಎಂಟು ಜನರಲ್ಲಿ ನಾಲ್ಕು ಜನ ಗುಣಮುಖರಾಗಿದ್ದು ಅವರನ್ನು ಇಂದು ಮನೆಗೆ ಕಳುಹಿಸಿಕೊಡಲಾಯಿತು.
![](https://shikarinews.com/wp-content/uploads/2020/05/WhatsApp-Image-2020-05-25-at-12.04.59-PM-2-1024x512.jpeg)
ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 34 ಕರೋನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ನಾಲ್ವರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 30 ಜನರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ಕು ಜನ ಗುಣಮುಖರಾದ ಹಿನ್ನಲೇಯಲ್ಲಿ ಡಿಹೆಚ್ ಓ ಡಾ.ರಾಜೇಶ್ ಸುರಗಿಹಳ್ಳಿ ಹಾಗೂ ವೈದ್ಯರ ತಂಡ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿ ಸಂತಸವನ್ನು ವ್ಯಕ್ತ ಪಡಿಸಿದರು
![](https://shikarinews.com/wp-content/uploads/2020/05/WhatsApp-Image-2020-05-25-at-12.04.59-PM-1-1024x512.jpeg)
ಇಂದು ರಂಜಾನ್ ಹಬ್ಬ ಇರುವುರಿಂದ ಎಂಟು ಪಾಸಿಟಿವ್ ಪ್ರಕರಣಗಳ ಪೈಕಿ ನಾಲ್ಕ ಜನರು ಚಿಕಿತ್ಸೆ ನೀಡುವ ಮೂಲಕ ಫಲಕಾರಿಯಾಗಿದ್ದು ಗುಣಮುಖರಾಗಿದ್ದು ಈ ಹಿನ್ನಲೇಯಲ್ಲಿ ಇಂದು ನಾಲ್ಕು ಜನರು ಆಸ್ಪತ್ರೆಯಿಂದ ಬಿಳ್ಕೊಡಿಗೆ ನೀಡಿದ್ದು ಇಂದು ರಂಜಾನ್ ಹಬ್ಬದ ಇರುವುದರಿಂದ ಮನೆ ಸೇರಿರುವುದು ಸಂತದ ವಿಷಯವಾಗಿದೆ.
ನಾಲ್ಕು ಜನರು ಶಿಕಾರಿಪುರದವರಾಗಿದ್ದು ಅಹಮದಬಾದ್ ಗೆ ತೆರಳಿದ 9 ಜನರ ಪೈಕಿ ಶಿಕಾರಿಪುರದವರು 8 ಜನರಿದ್ದರು ಅದರಲ್ಲಿ ನಾಲ್ಕು ಜನರು ಇಂದು ಸೊಂಕಿನಿಂದ ಗುಣಮುಖರಾಗಿ ತಮ್ಮ ಮನೆಯನ್ನು ಸೇರುತ್ತಿದ್ಧಾರೆ.