ಶಿವಮೊಗ್ಗ: ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್’ಗೆ ವಿರೋಧ.. ಕ್ವಾರಂಟೈನ್ ಸೆಂಟರ್ ಧ್ವಂಸ..!
ಶಿವಮೊಗ್ಗ: ಶಿವಮೊಗ್ಗ ಬಾಪೂಜಿನಗರದ ಕ್ವಾರಂಟೈನ್ ಕೇಂದ್ರದಲ್ಲಿ ಹೊರ ರಾಜ್ಯದವರನ್ನು ಕ್ವಾರಂಟೈನ್ ಮಾಡುತ್ತಿರುವುದನ್ನು ವಿರೋಧಿಸಿ ಉದ್ರಿಕ್ತ ಸ್ಥಳೀಯರಿಂದ ಕರೋನಾ ಕ್ವಾರಂಟೈನ್ ಕೇಂದ್ರವನ್ನು ದ್ವಂಸ ಮಾಡಿದ ಘಟನೆ ನಡೆದಿದೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಬಾಪೂಜಿ ನಗರದ ಬಿ.ಕೃಷ್ಣಪ್ಪ ಹಾಸ್ಟೆಲ್ ನಲ್ಲಿ ಹೊರರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು
ಕ್ವಾರಂಟೈನ್ ಕೇಂದ್ರದಲ್ಲಿದ್ದ ಕುರ್ಚಿ, ಟೇಬಲ್ ಹಾಗೂ ಸಿಸಿ ಕ್ಯಾಮರಾಗಳನ್ನು ಸ್ಥಳೀಯರು ಪುಡಿ ಮಾಡಿದ್ದಾರೆ
ಕ್ವಾರಂಟೈನ್ ಕೇಂದ್ರದ ಮೇಲೆ ಕಲ್ಲು ತೂರಾಟ ಕೂಡ ನಡೆಸಲಾಗಿದೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಲಾಠಿ ಬೀಸಿ ಸ್ಥಳೀಯರನ್ನು ಚದುರಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ
ಹೊರರಾಜ್ಯದಿಂದ ಬಂದವರನ್ನು ಬಾಪೂಜಿ ನಗರ ಹಾಸ್ಟೆಲ್ ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲಾಗಿದೆ ಈಗಾಗಲೇ ಈ ವಾರ್ಡ್ ನಲ್ಲಿ ಮೂರು ಕ್ವಾರಂಟೈನ್ ಕೇಂದ್ರಗಳಿದ್ದು ಇದರಿಂದ ಜನರು ವಿರೋಧ ವ್ಯಕ್ತ ಪಡಿಸಲು ಕಾರಣವಾಗಿದೆ ಎನ್ನಲಾಗಿದೆ.