ವರ್ಗಾವಣೆ ಸುದ್ದಿ ಕುರಿತು ಸ್ಪಷ್ಟನೆ..!

ಖಾಸಗಿ ಟಿವಿ ನ್ಯೂಸ್ ನಲ್ಲಿ ಬಂದ ಬ್ರೇಕಿಂಗ್‌ ಮಾಹಿತಿ ಆಧರಿಸಿ ನಮ್ಮಲ್ಲಿ ನೂತನ ಎಸ್ಪಿ ಅಧಿಕಾರ ಸ್ವೀಕರ ಎಂಬ ವರ್ಗಾವಣೆ ಸುದ್ದಿ ಮಾಡಿದ್ದು ನಂತರ ಅದು ಸುಳ್ಳು ಎನ್ನುವುದು‌ ತಿಳಿದು ಬಂದ ತಕ್ಷಣ ಸುದ್ದಿಯನ್ನು ನಮ್ಮ ವೆಬ್‌ನಿಂದ ತೆಗೆದುಹಾಕಿದ್ದೇವೆ.


ನಮ್ಮ‌ ಸುದ್ದಿಯಿಂದಾಗಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಪೊಲೀಸ್ ಮುಖ್ಯಸ್ಥರಾದ ಮಾನ್ಯ ಶ್ರೀ ಶಾಂತರಾಜು ಸರ್ ಅವರಿಗೆ ಮತ್ತು ಪೊಲೀಸ್ ಇಲಾಖೆಗೆ ಮುಜುಗರಕ್ಕೆ ಈಡುಮಾಡಿದೆ ನಮ್ಮ ಸಂಸ್ಥೆಗೂ ಇದು ಕಪ್ಪುಚುಕ್ಕೆಯಂತಾಗಿದೆ.

ಈ ಸುದ್ದಿ ನಮ್ಮ ಅವಸರದ, ಪರಾಮರ್ಷಿಸುವಲ್ಲಿನ ತಪ್ಪಿನಿಂದಾಗಿ ಆಗಿದೆ, ಶಿಕಾರಿನ್ಯೂಸ್ ಎಂದಿಗೂ, ಯಾರ ವಿರುದ್ಧವೂ ಉದ್ದೇಶಪೂರ್ವಕ, ದುರುದ್ದೇಶದಿಂದ ಕೂಡಿದ ಸುದ್ದಿ ಮಾಡುವುದಿಲ್ಲ ಎನ್ನುವ ಭರವಸೆ ನೀಡುವ ಜತೆಗೆ ಮೇಲ್ಕಂಡ ತಪ್ಪಿನ ಸುದ್ದಿಗಾಗಿ ಓದುಗರಲ್ಲಿ ಕ್ಷಮೆಯಾಚಿಸುತ್ತೇವೆ.

  • ರಘು ಶಿಕಾರಿ -ಶಿಕಾರಿಪುರ.

Admin

Leave a Reply

Your email address will not be published. Required fields are marked *

error: Content is protected !!