ಶಿಕಾರಿಪುರ: ಬೆಳಗ್ಗೆ ಜನಜಂಗೂಳಿ ಮಾಧ್ಯಹ್ನ ಸಂಪೂರ್ಣ ಬಂದ್ ..!

ಶಿಕಾರಿಪುರ: ಬೆಳಗ್ಗೆ ಜನಜಂಗೂಳಿ ಮಾಧ್ಯಹ್ನ ಸಂಪೂರ್ಣ ಬಂದ್ ..!

ಶಿಕಾರಿಪುರ ಪಟ್ಟಣ ಮಂಗಳವಾರ ತರಕಾರಿ, ಮೇಡಿಕಲ್ ದಿನಸಿ ಹಾಲು ಅಂಗಡಿಗಳನ್ನು ಹೊರತು ಪಡಿಸಿ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು ಬೆಳಗ್ಗೆ ತರಕಾರಿಗಳು ಹಾಗೂ ದಿನಸಿ ಪದಾರ್ಥಗಳನ್ನು ಖರೀದಿಸಲು ಜನರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.

ಈ ವರ್ಷ ಯುಗಾದಿ ಹಬ್ಬಕ್ಕಿಲ್ಲ ಬಟ್ಟೆ..!

ಈ ವರ್ಷ ಕರೋನ ಹಾವಳಿ ಜೋರಾಗಿದ್ದು ಜನರ ನಿದ್ದೆಯನ್ನು ಕೆಡೆಸಿದ್ದು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಮೂಲಭೂತ ವಸ್ತುಗಳನ್ನು ಮಾತ್ರ ಖರೀದಿಗೆ ಅವಕಾಶ ಇದ್ದು ಬಟ್ಟೆ ಅಂಗಡಿ ಕಂಪ್ಲಿಟ್ ಬಂದ್ ಆಗಿರುವ ಹಿನ್ನಲೇಯಲ್ಲಿ ಜನರಿಗೆ ಈ ವರ್ಷ ಯುಗಾದಿ ಹೊಸ ವರ್ಷಕ್ಕೆ ಹೊಸ ಬಟ್ಟೆ ಇಲ್ಲ ಇದರಿಂದ ಮನೆಯಲ್ಲಿ ಹಬ್ಬದ ಅಡುಗೆಯನ್ನು ಸವಿಯಬಹುದು ಅಷ್ಟೆ ಬಟ್ಟೆ ಅಂಗಡಿ ಮಾಲೀಕರಿಗೆ ಈ ಬಾರಿ ವ್ಯಪಾರದ ಮೇಲೆ ದೊಡ್ಡ ಹೊಡೆತ ಬಿದಿದ್ದೆ.

ಮೇಡಿಕಲ್ ತರಕಾರಿ ಫುಲ್ ರಶ್..!

ಪಟ್ಟಣದ ಬಹುತೇಕ ಮೇಡಿಕಲ್ ಶಾಪ್ ಗಳ ಮುಂದೆ ನೂರಾರು ಜನರು ಔಷಧಿಗಳ ಖರೀದಿಗೆ ಮುಗಿಬಿದ್ದಿದ್ದು ಬಿ.ಪಿ ಶುಗರ್ ಔಷಧಿಗಳನ್ನು ಮುಂಚಿತವಾಗಿ ತೆಗೆದುಕೊಳ್ಳಲು ಜನರು ಗ್ರಾಮೀಣ ಬಾಗಗಳಿಂದ ಆಗಮಿಸಿದ್ದರು ನಾಳೆ ಯುಗಾದಿ ಹಬ್ಬ ಇರುವುದಿಂದ ದಿನಸಿ ಅಂಗಡಿಗಳಲ್ಲಿ ಅತೀ ಹೆಚ್ಚಿನ ವ್ಯಾಪಾರ ವಹಿವಾಡು ನಡೆದಿದೆ ತರಕಾರಿ ಅಂಗಡಿಗಳಿಗೂ ವಿಶ್ರಾಂತಿಯೇ ಇಲ್ಲದಂತಗಿದೆ.

ಮಾಧ್ಯಹ್ನ 2 ಗಂಟೆಯ ನಂತರ ಸಂಪೂರ್ಣ ಸ್ತಬ್ದ.

ಪಟ್ಟಣದಲ್ಲಿ ಎರಡು ಗಂಟೆಯ ನಂತರ ಎಲ್ಲಾ ಅಂಗಡಿಗಳು ಬಂದ್ ಮಾಡಲಾಗಿದ್ದು ಯಾವುದೇ ಅಂಗಡಿಗಳು ತೆರೆಯುವಂತಿಲ್ಲ ಎಂಬ ನಿಯಮದಂತೆ ಪಟ್ಟಣ ಪೋಲಿಸ್ ರು ಹೆಚ್ಚಿನ ಶ್ರಮ ವಹಿಸಿ ಕಾರ್ಯವನ್ನು ನಿರ್ವಾಹಿಸುತ್ತಿದ್ದು ಜನರನ್ನು ನಿಯಂತ್ರಿಸುವುದೇ ದೊಡ್ಡ ಕೆಲಸವಾಗಿದ್ದು ಪೋಲಿಸ್ ಇಲಾಖೆ ಹರಸಾಹಸ ಪಡುತ್ತಿದೆ.

ಒಟ್ಟಿನಲ್ಲಿ ಜನರು ಸ್ವಯಂ ಎಚ್ಚರಿಕೆಯನ್ನು ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿದ್ದು ಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಬೇಕಾಗಿದ್ದು ಅನವಶ್ಯಕ ರಸ್ತೆಯಲ್ಲಿ ತಿರುಗುವುದನ್ನು ನಿಲ್ಲಿಸಿ ಮನೆಯಲ್ಲಿ ಕೂಳಿತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

Admin

Leave a Reply

Your email address will not be published. Required fields are marked *

error: Content is protected !!