ಶಿಕಾರಿಪುರ ಲಾಕ್ ಡೌನ್ ಏನೇಲ್ಲ ಇರುತ್ತೆ ಯಾವುದು ಇರುವುದಿಲ್ಲ..!
![ಶಿಕಾರಿಪುರ ಲಾಕ್ ಡೌನ್ ಏನೇಲ್ಲ ಇರುತ್ತೆ ಯಾವುದು ಇರುವುದಿಲ್ಲ..!](https://shikarinews.com/wp-content/uploads/2020/03/23.jpg)
ಶಿಕಾರಿಪುರ ಕರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ರಾಜ್ಯವೇ ಸಂಪೂರ್ಣ ಬಂದ್ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಕೂಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಏನೇಲ್ಲ ಇರುತ್ತೆ..!
ಕರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಶಿಸ್ತು ಕ್ರಮಕ್ಕಾಗಿ ತಹಶೀಲ್ದಾರ್ ಸೂಚನೆ ನೀಡಿದ್ದು ಮೇಡಿಕಲ್ , ದಿನಸಿ ಅಂಗಡಿ. ಹಾಲು. ತರಕಾರಿ ಮತ್ತು ಹೋಟೇಲ್ (ಪರ್ಸಲ್ ಮಾತ್ರ) ಅಂಗಡಿಗಳನ್ನು ತೆರೆಯಲು ಅವಕಾಶ ಇದ್ದು ಅದು ಬೆಳಗ್ಗೆ 10 ರಿಂದ 2 ಗಂಟೆಗಳ ವರೆಗೆ ಮಾತ್ರ ಮಾಧ್ಯಹ್ನದ ನಂತರ ಎಲ್ಲಾ ಬಂದ್ ಇರಲಿದೆ,
ಯಾವುದು ಇರುವುದಿಲ್ಲ..!
ಬಟ್ಟೆ ಅಂಗಡಿ, ಹಾರ್ಡ್ ವೇರ್ ಶಾಪ್, ಕಂಪ್ಯೂಟರ್, ಬೇಕರಿ, ಹೂವಿನ ಅಂಗಡಿ ಹಾಗೂ ಬಹುತೇಕ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಇರಲಿದೆ.
ಅನವಶ್ಯಕ ಓಡಾಡಿದ್ದಾರೆ ಬಿಳುತ್ತೆ ಕೇಸ್..!
ಅನವಶ್ಯಕವಾಗಿ ರಸ್ತೆಯಲ್ಲಿ ಜನರು ಓಡಾಡಿದ್ದಾರೆ ಸೇಕ್ಷನ್ 270 ಮಾರಣಾಂತಿಕ ಕ್ರಿಯೆ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಾಧ್ಯತೆ ಇದೆ ಇದನ್ನು ಉಲ್ಲಂಘಿಸಿದ್ದಾರೆ ಎರಡು ವರ್ಷಗಳ ವರೆಗೆ ಜೈಲು ಜಾಮೀನು ಸಿಗುವುದಿಲ್ಲ ಎನ್ನಲಾಗಿದೆ.
ನಾಳೆಯಿಂದ 31 ಮುಂದಿನ ಆದೇಶದ ವರೆಗೂ ಬಂದ್ ಇರಲಿದ್ದು ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಎಂ.ಪಿ ಕವಿರಾಜ್ ತಿಳಿಸಿದ್ದಾರೆ.