ಶಿಕಾರಿಪುರ: ಸಾಲಭಾದೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೈತ ಆತ್ಮಹತ್ಯೆ..!

ಶಿಕಾರಿಪುರ: ಸಾಲಭಾದೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೈತ ಆತ್ಮಹತ್ಯೆ..!

ಶಿಕಾರಿಪುರ ತಾಲೂಕ್ ಶೆಟ್ಟಹಳ್ಳಿ ಗ್ರಾಮದ ಆಂಜನೇಯ ತಂದೆ ರಂಗಪ್ಪ ಸುಮಾರು (42) ವರ್ಷ ಶುಕ್ರವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ವ್ಯಕ್ತಿಗೆ ಚಿಕ್ಕಲವತ್ತಿ ಗ್ರಾಮದ ಸ.ನಂ 54 ರಲ್ಲಿ  3-00 ಎಕರೆ ಜಮೀನು ಇದ್ದು ಈ ಬಾರಿಯ ಅತಿ ಹೆಚ್ಚು ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಯು ಹಾಳಾಗಿದ್ದು ನಷ್ಟವಾಗಿರುತ್ತದೆ ಬೆಳೆ ಬೆಳೆಯಲು ಅಮಟೆಕೊಪ್ಪ ಪ್ರಾಥಮಿಕ ಸಹಕಾರ  ಸಂಘದಲ್ಲಿ ಸುಮಾರು 40.000 ಸಾಲ ಮಾಡಿಕೊಂಡಿದ್ದು.

ಶಿರಾಳಕೊಪ್ಪ ಪಟ್ಟಣದ ಮಹಿಳಾ ಸಂಘದಲ್ಲಿ 50.000 ಸಾಲ ಮಾಡಿಕೊಂಡಿದ್ದಯ  ಖಾಸಗಿಯಾಗಿ 1-60.000 ಸಾಲ ಮಾಡಿದ್ದು ಒಟ್ಟು ಸಾಲ 2-50-000 ಇದ್ದು ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ಮೃತ ರೈತನಿಗೆ ಹೆಂಡತಿ ಮೂರು ಜನ ಮಕ್ಕಳಿದ್ದಾರೆ   ಸ್ಥಳಕ್ಕೆ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!