ಶಿವಮೊಗ್ಗ:ಜನತಾ ಕರ್ಫ್ಯೂಗೆ ಶಿವಮೊಗ್ಗ ಜನರಿಂದ ವ್ಯಾಪಕ ಬೆಂಬಲ..!
ಶಿವಮೊಗ್ಗ :ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನತಾ ಕರ್ಪ್ಯೂ ಮನವಿಗೆ ಶಿವಮೊಗ್ಗ ಜನತೆ ವ್ಯಾಪಕ ಬೆಂಬಲವನ್ನು ಸೂಚಿಸಿದ್ದಾರೆ.
ನಗರದ ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ- ಬಸ್ ಸಂಚಾರ ಬಂದ್ ಮಾಡಲಾಗಿದ್ದು ಎಲ್ಲಾ ಹೋಟೆಲ್, ಬಾರ್ ಗಳು ಬಂದ್ ಆಗಿವೆ.
ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ರಸ್ತೆಗಿಳಿಯದ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ.
ಬೀದಿ ಬದಿ ವ್ಯಾಪರಸ್ಥರಿಂದಲೂ ಜನತಾ ಕರ್ಫ್ಯೂ ಗೆ ಬೆಂಬಲ.
ಮೆಡಿಕಲ್ ಶಾಪ್, ಆಸ್ಪತ್ರೆಗಿಲ್ಲ ಭಯ-
ದಿನಬಳಕೆಗೆ ಅಗತ್ಯ ವಸ್ತು ಖರೀದಿಸಿ, ಮನೆಗೆ ವಾಪಾಸ್
ಆಗುತ್ತಿರುವ ಜನರು.
ಜನತಾ ಕರ್ಫ್ಯೂ ಎಫೆಕ್ಟ್ ಗೆ ಪ್ರಯಾಣಿಕರ ಪರದಾಟ;
ರಾಜ್ಯದ ಬೇರೆ ಬೇರೆ ಭಾಗದಿಂದ ಬಂದವರು ಬಸ್ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು
ಆಟೋ, ಲಾರಿ, ಟೆಂಪೊ ಹತ್ತಿ ಜನರು ಮನೆಗೆ ಪಯಣಿಸುತ್ತಿದ್ದಾರೆ ದೂರದ ಊರುಗಳಿಗೆ ತೆರಳಲು ಕಷ್ಟ ಪಡುತ್ತಿರುವ ಪ್ರಯಾಣಿಕರು
ಜನತಾ ಕರ್ಫ್ಯೂ ಮಾಹಿತಿ ಇದ್ದರೂ ಬಂದು ಸಂಕಷ್ಟಕ್ಕೆ ಸಿಲುಕಿದಾರೆ.