ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಯಿಂದ ಪ್ರತಿಭಟನೆ..!
ಶಿಕಾರಿಪುರ ಪಟ್ಟಣದ ತಾಲೂಕ್ ಕಛೇರಿ ವಿಶ್ವ ಹಿಂದೂ ಪರಿಷತ್ ಹಿಂದೂ ಜಾಗರಣಾ ವೇದಿಕೆ ಸೇರಿ ವಿವಿಧ ಹಿಂದೂ ಪರ ಸಂಘಟನೆ ವತಿಯಿಂದ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹೀರೆಮಠ್ ಹತ್ಯೆ ಖಂಡಿಸಿ ಪ್ರತಿಭಟನೆಯನ್ನು ನಡೆಸಿದರು .
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾ.ಅಧ್ಯಕ್ಷ ಕುಮಾರಸ್ವಾಮಿ ಮಾತಾನಾಡಿ ಹಿಂದೂಗಳ ಮೇಲೆ ಶತಮಾನಗಳಿಂದಲೂ ದಾಳಿ ನಡೆಯುತ್ತಿದ್ದು ಮತಾಂದರು ಇಡೀ ವಿಶ್ವವನ್ನು ಇಸ್ಲಾಮಿಕ್ ಮಾಡುವ ಉದ್ದೇಶದಿಂದ ಈ ರೀತಿಯ ಕೃತ್ಯವನ್ನು ನಡೆಸುತ್ತಿದ್ದಾರೆ.
ಯುವತಿಯನ್ನು ಕಾಲೇಜು ಆವರಣದಲ್ಲಿ ಅಮಾನವೀಯವಾಗಿ ಕೊಲೆ ಮಾಡಲಾಗುತ್ತದೆ ಎಂದರೇ ನಮ್ಮ ರಾಜ್ಯದಲ್ಲಿ ಕಾನೂನಿನ ಬಗ್ಗೆ ಯಾವುದೇ ಭಯವಿಲ್ಲದಂತಾಗಿದೆ.
ಈ ಕೂಡಲೇ ಹತ್ಯೆ ಮಾಡಿರುವ ಕ್ರೂರಿ ಫಯಾಜ್ ಗೆ ಗಲ್ಲಿಗೆ ಏರಿಸಬೇಕು ಎಂದು ಆಗ್ರಹಿಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಹಿರಿಯರಾದ ಎಸ್ ಬಿ ಮಠದ್, ವಿಶ್ವನಾಥ, ಪ್ರದೀಪ್ , ಶಿವಯ್ಯ, ಶಿವರಾಜ್ ಬೆಣ್ಣೆ, ಪರಶುರಾಮ, ಶರತ್, ವಿಜಯ್ ಕುಮಾರ್, ಇದ್ದರು.