ವಿಜಯೇಂದ್ರ ಗೆಲ್ಲದಂತೆ ವಾಮಾಚಾರ: ಸಂಸದ ಬಿವೈ ರಾಘವೇಂದ್ರ ಆರೋಪ..!
ಶಿಕಾರಿಪುರ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸೋಮವಾರ ಸಂಸದ ಬಿವೈ ರಾಘವೇಂದ್ರ ಪತ್ರಿಕಾಗೋಷ್ಠಿ ನಡೆಸಿ ವಿಜಯೇಂದ್ರ ಗೆಲ್ಲದಂತೆ ವಿರೋಧಿಗಳು ನಮ್ಮ ತೋಟದ ಮನೆಯ ಬಳಿ ವಾಮಾಚಾರ ಪ್ರಯೋಗ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ತಾಲೂಕಿನ ಹುಲಿಗಿನಕಟ್ಟೆ ಗ್ರಾಮದ ಬಳಿ ಇರುವ ಬಿ.ಎಸ್ ಯಡಿಯೂರಪ್ಪನವರ ತೋಟದ ಮನೆಯ ಕಂಪೌಂಡ್ ಬಳಿ ಪೂನಗು ಬೆಕ್ಕು ಮಣ್ಣಿನಲ್ಲಿ ಹೂತುಹಾಕಿದ್ದಾರೆ ಎಂದರು.
ವಾಮಾಚಾರದ ಅನುಭವ
ಈ ಕುರಿತು ಸಂಸದ ಬಿವೈ ರಾಘವೇಂದ್ರ ವಾಮಾಚಾರ ಆಗಿದೆ ಎಂದು ನಮಗೆ ಮೇ.11ರ ಮಧ್ಯರಾತ್ರಿ ರಾತ್ರಿ ವೇಳೆಯಲ್ಲಿ ಈ ರೀತಿಯ ಪ್ರಯೋಗ ನಡೆದಿದೆ ಬಿ.ಎಸ್ ಯಡಿಯೂರಪ್ಪನವರಿಗೂ ವಾಮಾಚಾರ ಬಿಸಿ ತಟ್ಟಿದ್ದು ನನಗೂ ಮತ್ತು ವಿಜಯೇಂದ್ರಗೆ ಇದರ ಅನುಭವ ಆಗಿದೆ ಬಿ.ಎಸ್ ಯಡಿಯೂರಪ್ಪನವರು ಅದೃಷ್ಟವಶಾತ್ ಬದುಕಿ ಉಳಿದಿದ್ದಾರೆ ಅವರ ಮಾಡಿರುವ ಪುಣ್ಯ ಕಾಪಾಡಿದೆ.
ಇದಕ್ಕೆ ಸಂಬಂಧಿಸಿದಂತೆ ವಿಷೇಶ ಪೂಜೆಯನ್ನು ಮಾಡಿಸಲು ಮುಂದಾದಾಗ ಪೂಜೆಗೆ ನೂರೆಂಟು ವಿಜ್ಞಗಳು ಉಂಟಾಗಿದೆ ಪೂಜೆ ಮಾಡಲು ಆಗಮಿಸಿದ ಪುರೋಹಿತರ ಕಾರು ಅಪಘಾತವಾಗಿದೆ ಎಂದರು.
ಈ ಕುರಿತು ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದು ವಾಮಾಚಾರ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳುವಂತೆ ಪ್ರಕರಣ ದಾಖಲಿಸಲಾಗಿದೆ.
News by: Raghu Shikari-7411515737