ವಿಜಯೇಂದ್ರ ಗೆಲ್ಲದಂತೆ ವಾಮಾಚಾರ: ಸಂಸದ ಬಿವೈ ರಾಘವೇಂದ್ರ ಆರೋಪ..!
![ವಿಜಯೇಂದ್ರ ಗೆಲ್ಲದಂತೆ ವಾಮಾಚಾರ: ಸಂಸದ ಬಿವೈ ರಾಘವೇಂದ್ರ ಆರೋಪ..!](https://shikarinews.com/wp-content/uploads/2023/05/IMG20230515123751.jpg)
ಶಿಕಾರಿಪುರ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸೋಮವಾರ ಸಂಸದ ಬಿವೈ ರಾಘವೇಂದ್ರ ಪತ್ರಿಕಾಗೋಷ್ಠಿ ನಡೆಸಿ ವಿಜಯೇಂದ್ರ ಗೆಲ್ಲದಂತೆ ವಿರೋಧಿಗಳು ನಮ್ಮ ತೋಟದ ಮನೆಯ ಬಳಿ ವಾಮಾಚಾರ ಪ್ರಯೋಗ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
![](https://shikarinews.com/wp-content/uploads/2023/05/IMG-20230515-WA0033-768x1024.jpg)
ತಾಲೂಕಿನ ಹುಲಿಗಿನಕಟ್ಟೆ ಗ್ರಾಮದ ಬಳಿ ಇರುವ ಬಿ.ಎಸ್ ಯಡಿಯೂರಪ್ಪನವರ ತೋಟದ ಮನೆಯ ಕಂಪೌಂಡ್ ಬಳಿ ಪೂನಗು ಬೆಕ್ಕು ಮಣ್ಣಿನಲ್ಲಿ ಹೂತುಹಾಕಿದ್ದಾರೆ ಎಂದರು.
![](https://shikarinews.com/wp-content/uploads/2023/05/IMG-20230515-WA0032-1024x461.jpg)
ವಾಮಾಚಾರದ ಅನುಭವ
ಈ ಕುರಿತು ಸಂಸದ ಬಿವೈ ರಾಘವೇಂದ್ರ ವಾಮಾಚಾರ ಆಗಿದೆ ಎಂದು ನಮಗೆ ಮೇ.11ರ ಮಧ್ಯರಾತ್ರಿ ರಾತ್ರಿ ವೇಳೆಯಲ್ಲಿ ಈ ರೀತಿಯ ಪ್ರಯೋಗ ನಡೆದಿದೆ ಬಿ.ಎಸ್ ಯಡಿಯೂರಪ್ಪನವರಿಗೂ ವಾಮಾಚಾರ ಬಿಸಿ ತಟ್ಟಿದ್ದು ನನಗೂ ಮತ್ತು ವಿಜಯೇಂದ್ರಗೆ ಇದರ ಅನುಭವ ಆಗಿದೆ ಬಿ.ಎಸ್ ಯಡಿಯೂರಪ್ಪನವರು ಅದೃಷ್ಟವಶಾತ್ ಬದುಕಿ ಉಳಿದಿದ್ದಾರೆ ಅವರ ಮಾಡಿರುವ ಪುಣ್ಯ ಕಾಪಾಡಿದೆ.
![](https://shikarinews.com/wp-content/uploads/2023/05/IMG-20230515-WA0031-768x1024.jpg)
ಇದಕ್ಕೆ ಸಂಬಂಧಿಸಿದಂತೆ ವಿಷೇಶ ಪೂಜೆಯನ್ನು ಮಾಡಿಸಲು ಮುಂದಾದಾಗ ಪೂಜೆಗೆ ನೂರೆಂಟು ವಿಜ್ಞಗಳು ಉಂಟಾಗಿದೆ ಪೂಜೆ ಮಾಡಲು ಆಗಮಿಸಿದ ಪುರೋಹಿತರ ಕಾರು ಅಪಘಾತವಾಗಿದೆ ಎಂದರು.
![](https://shikarinews.com/wp-content/uploads/2023/05/IMG20230515123423-1024x576.jpg)
ಈ ಕುರಿತು ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದು ವಾಮಾಚಾರ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳುವಂತೆ ಪ್ರಕರಣ ದಾಖಲಿಸಲಾಗಿದೆ.
News by: Raghu Shikari-7411515737