ಶಿರಾಳಕೊಪ್ಪ ಬಳಿ ಭೀಕರ ಅಪಘಾತ ಖಾಸಗಿ ಬಸ್ ಪಲ್ಟಿ ಕಾರು ಚಾಲಕ ಸಾವು..!

ಶಿರಾಳಕೊಪ್ಪ ಬಳಿ ಭೀಕರ ಅಪಘಾತ ಖಾಸಗಿ ಬಸ್ ಪಲ್ಟಿ ಕಾರು ಚಾಲಕ ಸಾವು..!

ಶಿರಾಳಕೊಪ್ಪ: ಸಮೀಪ ದೇವಿಕೊಪ್ಪ ಗ್ರಾಮದ ಬಳಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,ಈ ವೇಳೆ ಓರ್ವ ಮೃತಪಟ್ಟು ಕೆಲವರಿಗೆ ಗಾಯಗಳಾಗಿದೆ.

ಬುಧವಾರ ಮಧ್ಯಾಹ್ನದ ವೇಳೆಗೆ ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು ಶಿವಮೊಗ್ಗದ ಬಸವಪ್ರಸಾದ್ ಎಂದು ಗುರುತಿಸಲಾಗಿದೆ.

ಢಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ‌. ಢಿಕ್ಕಿಯ ರಭಸಕ್ಕೆ ಖಾಸಗಿ ಬಸ್ ಸಹ ಪಲ್ಟಿಯಾಗಿದ್ದು, ಪರಿಣಾಮವಾಗಿ ಹಲವರಿಗೆ ಗಾಯಗಳಾಗಿವೆ. ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!