ಶಿಕಾರಿಪುರದಲ್ಲಿ 14-15 ರಂದು ಸ್ಪರ್ಧಾತ್ಮಕ ಪರೀಕ್ಷೆ ತರಭೇತಿ :NSUI ಅಧ್ಯಕ್ಷ ಶಿವು ಹುಲ್ಮಾರ್..!
![ಶಿಕಾರಿಪುರದಲ್ಲಿ 14-15 ರಂದು ಸ್ಪರ್ಧಾತ್ಮಕ ಪರೀಕ್ಷೆ ತರಭೇತಿ :NSUI ಅಧ್ಯಕ್ಷ ಶಿವು ಹುಲ್ಮಾರ್..!](https://shikarinews.com/wp-content/uploads/2023/10/IMG-20231013-WA0042.jpg)
ಶಿಕಾರಿಪುರ ಪಟ್ಟಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2 ದಿನಗಳ ಉಚಿತ ತರಭೇತಿ ಶಿಬಿರ ಆಯೋಜಿಸಲಾಗಿದೆ ಎಂದು ತಾಲೂಕ್ NSUI ಅಧ್ಯಕ್ಷ ಶಿವು ಹುಲ್ಮಾರ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪಟ್ಟಣದ ಶಿವಗಿರಿ ಸಮುದಾಯದ ಭವನದಲ್ಲಿ ದಿನಾಂಕ 14,15 ಶನಿವಾರ. ಮತ್ತು ಭಾನುವಾರ NSUI ವಿಧ್ಯಾರ್ಥಿ ಸಂಘಟನೆ ವತಿಯಿಂದ ಕೆ.ಎಎಸ್ ಗ್ರೂಫ್ಸಿ ,ಎಸ್ ಡಿಎ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತರಭೇತಿಯನ್ನು ನಡೆಸಲಾಗುತ್ತಿದೆ.
![](https://shikarinews.com/wp-content/uploads/2023/10/IMG-20231013-WA0041-1024x461.jpg)
ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ರಾಜ್ಯದ ಎನ್ ಎಸ್ ಜಿ ಅಕಾಡೆಮಿ ನುರಿತ ಉಪನ್ಯಾಸಕರು ಸ್ಥಳೀಯ ಸಾಧನ ಶಂಕರ್ ಅಕಾಡೆಮಿ ಮುಖ್ಯಸ್ಥರಾದ ಶಂಕರ್ ಮತ್ತು ಅನೇಕರು ತರಬೇತಿ ನೀಡಲಿದ್ದಾರೆ.
ಈ ಶಿಬಿರದಲ್ಲಿ ಎನ್ಎಸ್ಯುಐ ರಾಜ್ಯ ಅಧ್ಯಕ್ಷ ಕೀರ್ತಿ ಗಣೇಶ ಜಿಲ್ಲಾ ಅಧ್ಯಕ್ಷರು ತಾಲೂಕಿನ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ.
News by: Raghu Shikari-7411515737