ಶಿಕಾರಿಪುರ‌: ಬುಧವಾರ ತಾಲೂಕ್ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಛೇರಿ ಉದ್ಘಾಟನೆ: ಮಹೇಶ್ ಹುಲ್ಮಾರ್

ಶಿಕಾರಿಪುರ‌: ಬುಧವಾರ ತಾಲೂಕ್ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಛೇರಿ ಉದ್ಘಾಟನೆ: ಮಹೇಶ್ ಹುಲ್ಮಾರ್

ಶಿಕಾರಿಪುರ :ತಾಲ್ಲೂಕು ಕಾಂಗ್ರೇಸ್ ಪಕ್ಷದ ಕಛೇರಿಯ ಉದ್ಘಾಟನೆಯೊಂದಿಗೆ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತರಾದ ಕಾಗೋಡು ತಿಮ್ಮಪ್ಪರವರಿಗೆ ಗೌರವಿಸಲಾಗುವುದು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಹುಲ್ಮಾರ್ ಮಹೇಶ್ ಹುಲ್ಮಾರ್ ತಿಳಿಸಿದರು.

ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿ ನೂತನವಾಗಿ ದಿನಾಂಕ 06-09-2023 ರ ಬುಧವಾರದಂದು ತಾಲ್ಲೂಕು ಕಾಂಗ್ರೇಸ್ ಪಕ್ಷದ ನೂತನ ಕಛೇರಿಯನ್ನು ಉದ್ಘಾಟನೆಯಾಗಲಿದೆ.

ಈ ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ಹಿರಿಯರು ದಿ  ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತರಾದ ಮಾಜಿ ಸಚಿವ ಕಾಗೋಡು ತೀಮ್ಮಪ್ಪರವರಿಗೆ ಗೌರವಿಸಿ ಸನ್ಮಾನಿಸಲಾಗುವುದು. 

ಈ ವೇಳೆ ಕಾಂಗ್ರೇಸ್ ಪಕ್ಷದ ಬೆಂಬಲದಿಂದ ಆಯ್ಕೆಯಾದ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಧ್ಯಕ್ಷರು ಸದಸ್ಯರು‌ ಅಭಿನಂದಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಸಂಗಮೇಶ್, ಮಾಜಿ‌ ಸಚಿವರಾದ ಕಿಮ್ಮನೆ ರತ್ನಕರ್, ಮಾಜಿ ಎಂಎಲ್ಸಿ ಆರ್ ಪ್ರಸನ್ನಕುಮಾರ್, ಮಾಜಿ ಅಪೆಕ್ಸ್  ಬ್ಯಾಂಕ್ ಅದ್ಯಕ್ಷ ಮಂಜುನಾಥ್ ಗೌಡ, ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ ಸುಂದರೇಶ್ ,ನಗರದ ಮಹಾದೇವಪ್ಪ,‌ ಗೋಣಿ ಮಾಲತೇಶ್, ತಾ.ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಪುಷ್ಪ‌ ಶಿವಕುಮಾರ್, ಜಿಲ್ಲೆಯ ತಾಲೂಕಿನ ಮುಖಂಡರು ಕಾರ್ಯಕರ್ತರು, ಆಗಮಿಸಲಿದ್ದಾರೆ ಎಂದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!