ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ವಿರುದ್ಧ ಕಾರ್ಯಕರ್ತರ ಅಸಮಾಧಾನ..!
![ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ವಿರುದ್ಧ ಕಾರ್ಯಕರ್ತರ ಅಸಮಾಧಾನ..!](https://shikarinews.com/wp-content/uploads/2023/09/IMG_20230906_13533137.jpg)
ಶಿಕಾರಿಪುರ ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯ ಉದ್ಘಾಟನೆ ಸಮಾರಂಭವನ್ನು ನಡೆಸಲಾಯಿತು.
![](https://shikarinews.com/wp-content/uploads/2023/09/IMG20230906122214-1024x576.jpg)
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ್ ಜಿಲ್ಲಾಧ್ಯಕ್ಷರಾದ ಎಚ್ಎಸ್ ಸುಂದರೇಶ್ ಅವರ ಎದುರಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ಕಾರ್ಯಕರ್ತರು ಅಸಮಾಧಾನವನ್ನು ಹೊರಹಾಕಿದ್ದಾರೆ.
![](https://shikarinews.com/wp-content/uploads/2023/09/IMG_20230906_13533878-1024x576.jpg)
ಪಕ್ಷದ ಕಚೇರಿ ಉದ್ಘಾಟನೆ ನಡೆಯುತ್ತಿರುವ ವಿಚಾರ ತಿಳಿದಿದ್ದರೂ ಆಹ್ವಾನ ನೀಡಿದರು ಕೂಡ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ ವೇಳೆ ಕಾರನ್ನು ನಿಲ್ಲಿಸಿ ಕಾರ್ಯಕರ್ತರು ವಿಧವಿಧವಾಗಿ ಬೇಡಿಕೊಂಡರು ಕಾರಿನಿಂದ ಇಳಿಯದೇ ಕಾರ್ಯಕರ್ತರ ಭಾವನೆಗೆ ಸ್ಪಂದಿಸದೆ ಕಾರ್ಯಕರ್ತರಿಗೆ ನೋವುಂಟು ಮಾಡಿ ಹಾಗೆ ಹೋಗಿದ್ದಾರೆ.
![](https://shikarinews.com/wp-content/uploads/2023/09/IMG_20230905_124458_026-1024x576.jpg)
![](https://shikarinews.com/wp-content/uploads/2023/09/IMG20230906132202-1024x576.jpg)
ಸೌಜನ್ಯಕ್ಕಾದರೂ ಕೆಳಗೆ ಇಳಿಯಬೇಕಿತ್ತು ಇದು ಸಾಕಷ್ಟು ಬೇಸರಕ್ಕೆ ಕಾರಣವಾಗಿದೆ ಎಂದು ತಾಲುಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ರವರು ಕಾಗೋಡು ತಿಮ್ಮಪ್ಪ ಜಿಲ್ಲಾಧ್ಯಕ್ಷ ಸುಂದರೇಶ್ ಎದುರು ನೋವನ್ನು ತೋಡಿಕೊಂಡರು.
![](https://shikarinews.com/wp-content/uploads/2023/09/IMG20230906132549-1024x576.jpg)
ಈ ಸಂದರ್ಭದಲ್ಲಿ ನೆರದಿದ್ದ ಕಾರ್ಯಕರ್ತರ ಎಲ್ಲಾ ಜಿಲ್ಲಾಧ್ಯಕ್ಷರಿಗೆ ಮುಗಿಬಿದ್ದು ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ಅವರ ಹಾಕಿದರು ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಸುಂದರೇಶ್ ಜಿಲ್ಲಾ ಉಸ್ತುವಾರಿ ಸಚಿವರು ತುರ್ತು ಸಭೆ ಇರುವುದರಿಂದ ಹಾಗೆ ಹೋಗಿದ್ದಾರೆ ಇಲ್ಲಿ ಯಾವುದೇ ಬಣ ರಾಜಕೀಯ ಬೇಡ ಏನಿದ್ದರೂ ಕೂತು ಮಾತಾಡಿ ಸರಿ ಮಾಡಿಕೊಳ್ಳೊಣ ಎಂದರು.
News by: Raghu Shikari-7411515737