ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಟೌನ್ ಪಿಎಸ್ಐ ಪ್ರಶಾಂತ್ ಅನೈತಿಕ ಚಟುವಟಿಕೆಗೆ ಬೆಂಬಲ: ದರ್ಶನ್ ಉಳ್ಳಿ ಆರೋಪ..!

ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಟೌನ್ ಪಿಎಸ್ಐ ಪ್ರಶಾಂತ್ ಅನೈತಿಕ ಚಟುವಟಿಕೆಗೆ ಬೆಂಬಲ: ದರ್ಶನ್ ಉಳ್ಳಿ ಆರೋಪ..!

ಶಿಕಾರಿಪುರ ಪಟ್ಟಣದ ಸಬ್ ಇನ್ಸ್‌ಪೆಕ್ಟರ್ ಪ್ರಶಾಂತ್ ಪಟ್ಟಣದಲ್ಲಿ ಅನೈತಿಕ ಚಟುವಟಿಕೆಗೆ ಬೆಂಬಲ ನೀಡುತ್ತಾ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ದುರಾಡಳಿತ ಮಾಡುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಉಳ್ಳಿ ದರ್ಶನ್ ಆರೋಪಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರು ಶಿಕಾರಿಪುರ ಪಟ್ಟಣದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ‌ ಪಿಎಸ್ಐ ಪ್ರಶಾಂತ್ ಭ್ರಷ್ಟಾಚಾರ ಆಡಳಿತ ಪೋಲಿಸ್ ದರ್ಪದಿಂದ ಜನರು ಬೆಸತ್ತಿದ್ದಾರೆ.

ಪಟ್ಟಣದಲ್ಲಿ ಬಡ ಜನರಿಂದ ಹಣ ವಸೂಲಿ ನಡೆಯುತ್ತಿದೆ ಓಸಿ, ಬೆಟ್ಟಿಂಗ್ ದಂದೆ, ಟ್ರಾಫಿಕ್ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳು ಇದೆ ಈ ಬಗ್ಗೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ ಸಾಮಾನ್ಯ ಜನರ ಮೇಲೆ‌ ದೌರ್ಜನ್ಯ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದು ಸರ್ಕಾರಕ್ಕೆ ಕೆಟ್ಟ ಹೆಸರು ತರುವುದು ಇವರ ಉದ್ದೇಶ ಬಿಜೆಪಿಯವರ ಬೆಂಬಲದಿಂದ ಈ ರೀತಿ ಮಾಡುತ್ತಿದ್ದಾರೆ ಎಲ್ಲಾ ಅನೈತಿಕ ಚಟುವಟಿಕೆಗೆ ಪೋಲಿಸ್ ಇಲಾಖೆಯ ಬೆಂಬಲ‌ ಇದೆ ಎಂದು ಆರೋಪಿಸಿದರು.

ಈಗಾಗಲೇ ನಾವು ಈ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಗಮನಕ್ಕೆ ತರಲಾಗುವುದು ವ್ಯವಸ್ಥೆ ಸರಿಯಾಗದೆ ಇದ್ದಾರೆ ಪಟ್ಟಣ ಪೋಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾವುದು ಎಂದರು‌.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸನ ಮಂಜಪ್ಪ,ರಾಜು ಉಡುಗಣಿ, ಸುಹಾಸ್ ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!