ಜಾತಿ-ಜಾತಿಗಳ ನಡುವೆ ಬಿಜೆಪಿ ಮೀಸಲಾತಿ ವಿಷಬೀಜ ಮತ ಪಡೆಯುವ ಹುನ್ನಾರ: ಮಾರವಳ್ಳಿ ಉಮೇಶ್
ಪಟ್ಟಣದ ಸುದ್ದಿಮನೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮಾರವಳ್ಳಿ ಉಮೇಶ್ ಸ್ವಾತಂತ್ರ್ಯ ನಂತರ ಕಾಂಗ್ರೇಸ್ ಪಕ್ಷವು ಪರಿಶಿಷ್ಟ ಪರಿಶಿಷ್ಟ ಪಂಗಡದವರಿಗೆ ಅಲ್ಪಸಂಖ್ಯಾತರಿಗೆ ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ, ವಿದ್ಯುತ್, ಭೂರಹಿತರಿಗೆ ಭೂಮಿ, ಕೋಳವೆಭಾವಿ ಅದಕ್ಕೆ ವಿದ್ಯುತ್ ಹೀಗೆ ಎಲ್ಲಾ ರೀತಿಯಲ್ಲಿ ಅನುಕೂಲ ಈ ಜನಾಂಗದವರಿಗೆ ನೀಡಿದ ಮೀಸಲಾತಿ ಬಿಜೆಪಿಯವರು ಅಧಿಕಾರಕ್ಕೆ ಬಂದನಂತರ ತೆಗೆದು ಹಾಕುವ ಹುನ್ನಾರ ನಡೆಸಿದೆ ಎಂದರು.
ಸರ್ಕಾರದ ಯಾವುದೇ ಇಲಾಖೆಗಳಲ್ಲಿ ಎಸಿಪಿಟಿಎಸ್ಪಿ ಯೋಜನೆಯಡಿ ಶೇಕಡಾವಾರು 25% ಅನುದಾನ ನೀಡಬೇಕಾಗಿದ್ದನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ವಿದ್ಯಾರ್ಥಿವೇತನ, ಅವರಿಗೆ ಸಹಾಯಧನ ಸ್ಥಗಿತಗೊಳಿಸಿದ್ದಾರೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ತೋಟಗಾರಿಕೆ ಹನಿನೀರಾವರಿಗೆ ನೀಡುತ್ತಿದ್ದ ಸೌಲಭ್ಯಗಳನ್ನು ಕಳೆದ ಐದು ವರ್ಷಗಳಿಂದ ಸ್ಥಗಿತಗೊಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಮೇಲೆ ಎಸ್ಸಿ ಎಸ್ಟಿ ಜನಾಂಗದ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ. ಈರೀತಿ ದೌರ್ಜನ್ಯವೆಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳದೇ, ಅವರಿಗೆ ಹೂವಿನ ಮಾಲೆ ಹಾಕಿ ಪಕ್ಷದಿಂದ ಟಿಕೇಟು ನೀಡಿ ಆಂಥವರನ್ನೇ ಬೆಂಬಲಿಸಿ ಮೆರವಣಿಗೆ ಮಾಡುವ ಪ್ರವೃತ್ತಿಯನ್ನು ಬಿಜೆಪಿ ಪಕ್ಷದವರು ಬೆಳೆಸಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಸದಾಶಿವ ಆಯೋಗವನ್ನು, ನಾಗಮೋಹನ ದಾಸ್, ರವಿವರ್ಮ ರವರಂತಹ ನ್ಯಾಯಾಧೀಶರ ವರದಿಯನ್ನು ಇವರು ಒಪ್ಪದೇ, ಚುನಾವಣೆಯ ಸಂದರ್ಭದಲ್ಲಿ ಒಳಮೀಸಲಾತಿ ನೆಪದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಮತಗಳನ್ನು ಓಲೈಸಲು ಬಂಜಾರ, ಕೊರಚ,ಕೊರಮ ಬೋವಿ ಜನಾಂಗಗಳಿಗೆ ಅನ್ಯಾಯ ಮಾಡಿದ್ದಾರೆ. ಇದರಿಂದಾಗಿ ಮುಂದೆ ಆಗುಹೋಗುಗಳ ಬಗ್ಗೆ ಗಮನ ಹರಿಸಿಲ್ಲ.
ಮುಸ್ಲಿಂರಿಗೆ 2ಬಿ ಮೀಸಲಾತಿಯ ರದ್ದು ಮಾಡಿ ಹಿಂದೂಗಳನ್ನು ಒಗ್ಗೂಡಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಮುಸ್ಲೀಮರು ದಂಗೆ ಎದ್ದು ಅವರವರೇ ಹೊಡೆದಾಟ ನಡೆಸುವಂತಹ ಕುತಂತ್ರಗಾರಿಕೆ ಬಿಜೆಪಿ ಪಕ್ಷಮಾಡಿದೆ.
ಇದರಿಂದಾಗಿ ಬಂಡಾಯ ಕಾಂಗ್ರೇಸ್ ಅಭ್ಯರ್ಥಿಯಾದ ನಾಗರಾಜ್ ಗೌಡರಿಗೆ ತಾಲ್ಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಮುಸಲ್ಮಾನರು ಅತಿಹೆಚ್ಚಿನ ಮತಗಳನ್ನು ನೀಡಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಗೋಷ್ಟಿಯಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಎಸ್ಟಿ ಸಮಾಜದ ಮುಖಂಡ ಸುರೇಶ್ ಭದ್ರಾಪುರ, ಇಟಿಗಿಹಳ್ಳಿ ಭೀಮಾನಾಯ್ಕ್, ಮಾಜಿ ಪುರಸಭಾ ಆಶ್ರಯ ಸಮಿತಿ ಸದಸ್ಯ ನಾಗರಾಜ್ ಇದ್ದರು.
News by: Raghu Shikari-7411525737