ನಾಲ್ಕು ವರ್ಷದ ಮಗುವಿನ ಚಿಕಿತ್ಸೆಗೆ ಮಿಡಿದ ಸಿಎಂ ಹೃದಯ ..!
ಹಾವೇರಿ: ನಾಲ್ಕು ವರ್ಷ ಪುಟ್ಟ ಬಾಲಕ ಅನಾರೋಗ್ಯದಿಂದ ಬಳಲುತ್ತಿದ್ದು ಕಡುಬಡ ಕುಟುಂಬದ ಬಾಲಕನಿಗೆ ದೊಡ್ಡ ಕಾಯಿಲೆ ಕಂಡಿದ್ದು ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕಾಗಿದ್ದು ಚಿಕಿತ್ಸೆಯ ನೇರವಿಗೆ ಸಿಎಂ ಹೃದಯ ಮಿಡಿದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಚಂದಾಪುರ ಗ್ರಾಮದ ಇಬ್ರಾಹಿಂ ಕಮ್ಮಾರ ಎಂಬುವರರ ನಾಲ್ಕು ವರ್ಷ ಮಗು ಮೊಹಮ್ಮದ್ ಇಚಾನ್ ಇಹ್ರಾಹಿಂ ಕಮ್ಮಾರ ಮೂಳೆ ಮಜ್ಜೆಯ ಕಾಯಿಲೆಯಿಂದ ಬಳಲುತ್ತಿರುವ ವಿಷಯ ಕುರಿತು ಸಾಮಾಜಿಕ ಜಾಲತಾಟದಲ್ಲಿ ಚಿಕಿತ್ಸೆಗೆ ನೆರವು ನೀಡುವಂತೆ ಸುದ್ದಿ ಹರಿದಾಡುತ್ತಿರುವ ವಿಷಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಗೆ ತಿಳಿದು ತಕ್ಷಣ ಚಿಕಿತ್ಸೆಯ ಸಂಪೂರ್ಣ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸುವಂತೆ ಆದೇಶ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಪತ್ರದ ಮೂಲಕ ಆದೇಶ ಮಾಡಿ ಬ್ರೈನ್ ಮೋರೊ ಟ್ರಾನ್ಸಫರ್ ಚಿಕಿತ್ಸೆಗೆ ಬೇಕಾದ ಸಂಪೂರ್ಣ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರನಿಧಿಯಿಂದ ಭರಿಸುವುದಾಗಿ ಪತ್ರ ಬರೆದು ಬಡ ಮುಸ್ಲಿಂ ಕುಟುಂಬದ ನೂವಿಗೆ ಸ್ಪಂದಿಸಿದ್ದಾರೆ.
ಜಾತಿ ಮತ ಧರ್ಮಗಳನ್ನು ಮೀರಿ ನೂಂದವರ ಕಷ್ಟಗಳಿಗೆ ಸ್ಪಂದಿಸುವುದು ನಿಜ ಮಾನವೀಯತೆ ರಾಜಕೀಯಗಳನ್ನು ಮೀರಿ ಮಾಡಿದ ಸಹಕಾರಿ ಎಂದಿಗೂ ಶಾಶ್ವತವಾಗಿರುತ್ತದೆ.
ಮುಖ್ಯಮಂತ್ರಿಗಳು ಈ ವಿಚಾರಗಳಲ್ಲಿ ಎಂದಿಗೂ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದ್ದಾರೆ ಎಲ್ಲಾ ರಾಜಕಾರಣಿಗಳು ಇಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.
News by Raghu shikari-7411515737