ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ತೀರ್ಥಹಳ್ಳಿಯ ನಂಟು.. ಐದು ಮನೆಗಳ ಮೇಲೆ ಪೋಲಿಸರ ದಾಳಿ…!!

ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ತೀರ್ಥಹಳ್ಳಿಯ ನಂಟು.. ಐದು ಮನೆಗಳ ಮೇಲೆ ಪೋಲಿಸರ ದಾಳಿ…!!

ತೀರ್ಥಹಳ್ಳಿ: ಕಳೆದ ಶನಿವಾರ ಸಂಜೆ ಆಟೊ ರಿಕ್ಷಾ ಒಂದು ಅನುಮಾನಸ್ಪದವಾಗಿ ಸ್ಫೋಟವಾದ ಪ್ರಕರಣ ಮಂಗಳೂರಿನಲ್ಲಿ ನಡೆದಿತ್ತು. ಸ್ಥಳ ಪರಿಶೀಲನೆ ವೇಳೆ ನಕಲಿ ಆಧಾರ್ ಕಾರ್ಡ್ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಉಗ್ರ ಚಟುವಟಿಕೆಯ ಅನುಮಾನ ಬಂದ ಹಿನ್ನಲೆ ಶಾರೀಕ್ ನನ್ನು ಬಂದಿಸಿದ್ದರು‌.

ಶಂಕಿತ ಉಗ್ರರು ಎನ್ನಲಾದ ತೀರ್ಥಹಳ್ಳಿಯ ಐದು ಮನೆಗಳ ಮೇಲೆ ಸೋಮವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದ್ದಾರೆ . ಮಂಗಳೂರು ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ಈ ದಾಳಿ ನಡೆಸಲಾಗಿದೆ . ಮತೀನ್ , ಬಂಧಿತ ಮಾಜ್ ಗೆ ಸಂಬಂಧಿಸಿದ ಎರಡು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ .

ಸಾಜಿದ್ ಮತ್ತು ಶಾರೀಕ್ ಸಂಬಂಧಿಯೊಬ್ಬರ ಮನೆಯ ಪರಿಶೀಲನೆ ನಡೆದಿದೆ . ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು

ಆಗುಂಬೆ ಠಾಣಾಧಿಕಾರಿ ಶಿವಕುಮಾರ್ , ಮಾಳೂರು ಠಾಣಾಧಿಕಾರಿ ಪ್ರವೀಣ್ ನೀಲಮ್ಮನವರ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು .

ಈ ಸಂದರ್ಭದಲ್ಲಿ ಆರೋಪಿಗಳು ಎಸಗಿದ ಕೃತ್ಯಗಳ ಕುರಿತು ಕೆಲವು ಸಾಕ್ಷಾಧಾರಗಳು ಮತ್ತು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ .

ಶಾರಿಕ್ ನ ಸಂಚು ಏನಾಗಿತ್ತು ? ಉಗ್ರ ಸಂಘಟನೆಗಳು ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಪ್ರಮುಖರ ಜತೆ ಆತನ ಸಂಪರ್ಕವೇನು ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!