ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ತೀರ್ಥಹಳ್ಳಿಯ ನಂಟು.. ಐದು ಮನೆಗಳ ಮೇಲೆ ಪೋಲಿಸರ ದಾಳಿ…!!
![ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ತೀರ್ಥಹಳ್ಳಿಯ ನಂಟು.. ಐದು ಮನೆಗಳ ಮೇಲೆ ಪೋಲಿಸರ ದಾಳಿ…!!](https://shikarinews.com/wp-content/uploads/2022/11/20221121_150058.jpg)
ತೀರ್ಥಹಳ್ಳಿ: ಕಳೆದ ಶನಿವಾರ ಸಂಜೆ ಆಟೊ ರಿಕ್ಷಾ ಒಂದು ಅನುಮಾನಸ್ಪದವಾಗಿ ಸ್ಫೋಟವಾದ ಪ್ರಕರಣ ಮಂಗಳೂರಿನಲ್ಲಿ ನಡೆದಿತ್ತು. ಸ್ಥಳ ಪರಿಶೀಲನೆ ವೇಳೆ ನಕಲಿ ಆಧಾರ್ ಕಾರ್ಡ್ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಉಗ್ರ ಚಟುವಟಿಕೆಯ ಅನುಮಾನ ಬಂದ ಹಿನ್ನಲೆ ಶಾರೀಕ್ ನನ್ನು ಬಂದಿಸಿದ್ದರು.
![](https://shikarinews.com/wp-content/uploads/2022/11/20221121_150358-1024x576.jpg)
ಶಂಕಿತ ಉಗ್ರರು ಎನ್ನಲಾದ ತೀರ್ಥಹಳ್ಳಿಯ ಐದು ಮನೆಗಳ ಮೇಲೆ ಸೋಮವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದ್ದಾರೆ . ಮಂಗಳೂರು ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ಈ ದಾಳಿ ನಡೆಸಲಾಗಿದೆ . ಮತೀನ್ , ಬಂಧಿತ ಮಾಜ್ ಗೆ ಸಂಬಂಧಿಸಿದ ಎರಡು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ .
ಸಾಜಿದ್ ಮತ್ತು ಶಾರೀಕ್ ಸಂಬಂಧಿಯೊಬ್ಬರ ಮನೆಯ ಪರಿಶೀಲನೆ ನಡೆದಿದೆ . ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು
![](https://shikarinews.com/wp-content/uploads/2022/11/20221121_150506-1024x576.jpg)
ಆಗುಂಬೆ ಠಾಣಾಧಿಕಾರಿ ಶಿವಕುಮಾರ್ , ಮಾಳೂರು ಠಾಣಾಧಿಕಾರಿ ಪ್ರವೀಣ್ ನೀಲಮ್ಮನವರ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು .
ಈ ಸಂದರ್ಭದಲ್ಲಿ ಆರೋಪಿಗಳು ಎಸಗಿದ ಕೃತ್ಯಗಳ ಕುರಿತು ಕೆಲವು ಸಾಕ್ಷಾಧಾರಗಳು ಮತ್ತು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ .
ಶಾರಿಕ್ ನ ಸಂಚು ಏನಾಗಿತ್ತು ? ಉಗ್ರ ಸಂಘಟನೆಗಳು ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಪ್ರಮುಖರ ಜತೆ ಆತನ ಸಂಪರ್ಕವೇನು ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
News by Raghu shikari-7411515737